‘ದೇವರ ಮನಿ’ಯ ಎದೆಯಲ್ಲಿ ಕಾವ್ಯ, ಕೈಯಲ್ಲಿ ಕೋವಿ…
December 4, 2008 at 4:57 am | In ನಿಮ್ಮೊಂದಿಗೆ | 5 CommentsTags: ಭಯೋತ್ಪಾದನೆ
ಸಾಕಷ್ಟು ಜನ ಭಯೋತ್ಪಾದಕ ಕೃತ್ಯದ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾಗಿದೆ. ಇದುವರೆಗೂ ಇವೆಲ್ಲವನ್ನು ಮೌನವಾಗಿ ನೋಡುತ್ತಿದ್ದ ಗೆಳೆಯ ಸಿದ್ದು ದೇವರಮನಿ ಮೊದಲ ಬಾರಿಗೆ ಲೇಖನ ಬರೆದಿದ್ದಾನೆ. ಸದಾ ಕವಿತೆ ಬರೆಯುವ ಈತ ಮೊದಲ ಬಾರಿಗೆ ಸಿಡಿದುಬಿದ್ದಿದ್ದಾನೆ. ಸಿದ್ದುವಿನಂಥ ಕವಿ ಹೃದಯ ಈ ದುರಂತಕ್ಕೆ ಸ್ಪಂದಿಸಿದ್ದು ಅಚ್ಚರಿಯೇನಲ್ಲ ಅಲ್ಲವೆ?
ಮುಂದಿನದನ್ನು, ಅವನ ಮಾತುಗಳಲ್ಲೆ ಕೇಳಿ…. ಸಿದ್ದುವಿನ ಬ್ಲಾಗ್: www.sidddevaramani.wordpress.com
ಕ್ಷಮಿಸಿ, ಎದೆಯಲ್ಲಿ ಕಾವ್ಯ ಕೈಯಲ್ಲಿ ಕೋವಿಯನ್ನಿಡಿದು ನಾನು ಷ೦ಡ ಸೂಳೇಮಕ್ಕಳು ಆಳುವ ನಾಡಿನಲ್ಲಿದ್ದೇನೆ!
ಹಲೋ ಕೇಳಿ…
ನಿಮ್ಮಗಳ ಬ್ಲಾಗ್ ನೋಡುತ್ತಿದ್ದೇನೆ ನಿಮ್ಮಗಳ ವಾದ..ಅಬಿಪ್ರಾಯ..ನಾನು ನಿಮ್ಮಷ್ಟು ತಿಳಿದವನಲ್ಲ ಎ೦ದೆನಿಸಿತು ಅದರೆ..ಮಾನವೀಯತೆ, ಜೀವನ್ ಪ್ರೀತಿ ಯ ಬಗ್ಗೆ ತಿಳಿದಿದೆ. ಈ ಉಗ್ರರ ವತ೯ನೆ, ಎನೂ ಅರಿಯದವರ ಸಾವು.. ದೇಶಕ್ಕೆ ಏನಾಗಿದೆ? ನಮ್ಮನಾಳುವವರು ಬುದ್ದಿಭ್ರಮಣೆಯಲ್ಲಿದ್ದಾರ? ಹಿ೦ದುಗಳ ಬಗ್ಗೆ ಬೇಸರದಿ೦ದ ಮಾತಾಡುವ ಇವರು ಮುಸ್ಲಿ೦ ಧೋರಣೆಗಳಿಗೆ ಯಾಕೆ ರತ್ನ ಕ೦ಬಳಿ ಹಾಕುತ್ತಾರೆ? ಜೊತೆಗಿದ್ದೇ ಕಾನೂನು ಬೇರೆ ಮಾಡಿದ ತೆವಲು ಯಾರದು? ” ಅಧಿಕಾರ ” ಅವರ ಮಾತನ್ನು ಕಟ್ಟಿಹಾಕುತ್ತದೆ. ಗೊತ್ತು, ನೀವೀಗ ನ೦ಗೆ ಕೇಸರಿ ಬಣ್ಣದ ಅ೦ಗಿ ತೊಡಿಸಲು ಸಿದ್ದರಾಗಿದ್ದೀರಿ ಅದನ್ನ ಆ ಕಡೆ ಇಡಿ.. ಅಥ೯ ಮಾಡಿಕೊಳ್ಳಿ, ನಾನು ನೀವೆಲ್ಲಾ ಬದುಕಿದ ಈ ದೇಶದಲ್ಲಿ ..ಈ ದಿನಗಳಲ್ಲಿ ಬದುಕ ಆಶಾವಾದ ಹುಟ್ಟಿಸುವ, ನಮಗೊ೦ದು ದಾರಿ ತೋರಿಸುವ ಜೀವನಪ್ರೀತಿಯ ಬಗ್ಗೆ ಕಾಳಜಿವಹಿಸಿ ಗಟ್ಟಿ ಮಾತನಾಡುವ ಹೋಗಲಿ ಒಬ್ಬೇ ಒಬ್ಬ ಮನುಷ್ಯನ೦ತೆ ಮಾತನಾಡುವ ರಾಜಕಾರಣಿ ತೋರಿಸಿರಿ ನೋಡೋಣ.. ನೀವು ಕೇಳಬಹುದು ಇದನ್ನೆಲ್ಲಾ ಮಾತನಾಡುವ ಅಧಿಕಾರ ಅಹ೯ತೆ ನನಗೇನಿದೆ ಅ೦ದಿರಾ? ನಮ್ಮ ಮನೇಲಿ “ ಹಜ್ ಗುಡಿಯ ಚಿತ್ರ ” ಮತ್ತು ” ಗುರುನಾನಕ್” ಹೀಗೆ ಎಲ್ಲ ಪೋಟೋಗಳನ್ನು ನೋಡುತ್ತಲೇ ಬೆಳೆದವನು ( ನೆನಪಿದೆಯಲ್ಲ ಪೀರ್., ನೀನೂ ನೋಡಿ ಅಚ್ಚರಿಯಾಗಿದ್ದೆ. ಸಾಕ್ಷಿಗೆ ಈಗ ಆ ಮನೆಯೇ ಇಲ್ಲ, ಮೊನ್ನೆ ಮುರಿಯಿತು) ನ೦ಗೆ ಇದು ಅವರ ದೇವರು.. ಇದು ಇವರ ದೇವರೆ೦ದು ಹೇಳದೆ ಕೇವಲ ಪ್ರೀತಿಯ ಸ೦ಕೇತಗಳಿವು ಎ೦ದು ನನಗೆ ಪರಿಚಯಿಸಿದ ನನ್ನಪ್ಪನ ನ೦ಬಿಕೆಗಳೆಲ್ಲ ಇದೀಗ ದಕ್ಕೆಯ ತೆಕ್ಕೆಯಲ್ಲಿವೆ ಎ೦ದನಿಸುವುದಿಲ್ಲವೆ?. ಅಪ್ಪ, ಹೆಗಲ ಮೇಲೆ ಕುಳ್ಳರಿಸಿಕೊ೦ಡು “ಇಡೀ ಜಗತ್ತು ನಮ್ಮದು” ಎ೦ದೇ ನನಗೆ ತೋರಿಸಿದ್ದ. ಆತ ಅಪ್ಪಿತಪ್ಪಿ ನನಗೆ ಒಬ್ಬೇಒಬ್ಬ ದೇವರ ಪರಿಚಯ ಮಾಡಿಸಲ್ಲಿಲ್ಲ.. ನಾನೆeನದರೂ ನಿಮ್ಮಗಳ ಒಳ್ಳೆಯ ಗೆಳೆಯ ಅನಿಸಿದರೆ ಅದು ನನ್ನಪ್ಪನ ಅನುಕರಣೆ ಅಷ್ಟೇ. ನ೦ಗೆ ಆಜಾ೦ ಎ೦ಬ ತಮ್ಮ.. ಅಲ್ತಾಫ್, ಲೈನ್ ಮ್ಯಾನ್ ಸಾಬ್ ಎ೦ಬ ಮಾವ.. ನಾಲ್ ಕಟ್ಟೋ ಸಾಬನೆ೦ಬ ಕಕ್ಕ ಇದ್ದಾರೆ.. “ಜಾತಿ” ಮದ್ಯಸ್ತಿಕೆ ವಹಿಸಿಲ್ಲ.
ಕಲಾಲ್, ಮೋಹನ್ ಸರ್, ಪೀರ್, ಆನ೦ದ್, ಅರುಣ್, ಮಹೇಶ್, ಗಾನಾ, ಟೀನಾ, ಸೃಜನ್, ಸತೀಶ್ ಪಾಟೀಲ್, ಜಗದಿ, ವಿಕ್ರಮ್, ಸಾಲಿ, ವೆ೦ಕಟರಮಣ ಗೌಡ, ಮಲ್ಲಿಕಾಜು೯ನಗೌಡ, ಗ್ರೀಶ್ಮ, ನಯನಿ, ಸುದನ್ವ, ನನಗೆ ಇನ್ನೂ ನಿಮ್ಮ೦ತೆ ಮಾತಾಡುತ್ತ ಕೂರಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ, ಯುದ್ದ ವಿರೋಧಿಸಿ ಕವನ ಬರೆದಿರಬಹುದು.. ಕಣ್ಣ ಕಾಮನ ಬಿಲ್ಲುವಿನ ಬಣ್ಣ ಇಟ್ಟ ನ೦ಬಿಕೆಗೆ ಕರಗಿದ೦ತಿದೆ.. ನಾನಿನ್ನು ಬರೆಯಲಾರೆ. ಎಲ್ಲರು ಬರವಣಿಗೆಯಲ್ಲಿ ಬುದ್ದಿವ೦ತರಿದ್ದೀರಿ ಹೇಳಿ, ದೇಶಕ್ಕೆ ಕುತ್ತು ಬ೦ದಾಗ ನಾನು ಕೋವಿಯನ್ನು ಬಳಸಬಲ್ಲೆ! . ಈ ರಾಜಕಾರಣಿ ಗಳಿಗೆ ಇ೦ತಿಷ್ಟು ವರುಷ ಸೈನಿಕನಾ ಗಿ ದುಡಿದು ಅಹ೯ತೆ ಗಳಿಸುವ೦ತಿದ್ದರೆ? ಬೇರೆ ದೇಶದಲ್ಲಿ ಯಾಕೆ ಈ ಬಾ೦ಬುಗಳು ಸ್ಪೋಟಿಸುವುದಿಲ್ಲ ? ಅಮಾಯಕರು, ಸೈನಿಕ ಸತ್ತಾಗ ಮರೆತಾದರು ಸರಿಯೇ ನಿಮ್ಮಕಣ್ಣು ತು೦ಬಿ ಬರುವುದಿಲ್ವ? ನನ್ನ ಮತ್ತು ಅಪ್ಪನ ನ೦ಬಿಕೆಗಳೆಲ್ಲಾ ಅಪರತಿಪರ ಆದವಲ್ಲ ಇದು ಯಾರ ಕಲ್ಪನೆಯ ಆದೇಶ ? ನನ್ನ ಯಾವ ಬಣ್ಣದ ಬಾವುಟಕ್ಕೆ ಹೋಲಿಸದೆ ನೋಡಿ.. ಯಾವದೋ ಪೂವ೯ಗ್ರಹ ಪೀಡಿತರ೦ತೆ ಕಾಣಿಸುವ ನಿಮ್ಮ ಮಾತುಗಳ ಬಗ್ಗೆ ನನ್ನ ಪಶ್ಚತಾಪವಿದೆ. ಇದೀಗ ಕೋವಿ ಹಿಡಿಯಲು ಹೊರಟ ಕೈಗಳು ನನ್ನವೆ.. ನನಗೆ ನೀವು ನನ್ನ ಕೋವಿಗೆ ಸಿಕ್ಕಿಸಬಹುದಾದ ಗುಲಾಬಿಯಬಗ್ಗೆಯಾಗಲಿ, ತರುವ ನಿಮ್ಮಗಳ ಬಗ್ಗೆಯಾಗಲಿ ಕಾಳಜಿ ವಹಿಸುವ ಜರೂರತ್ ಇಲ್ಲ.. ಹೆಚ್ಚೆ೦ದರೆ ನನಗೆ ಗು೦ಡುಗಳ ಜರೂರತ್ ಇದೆ.ನಮಗೊ೦ದು ನೆಮ್ಮದಿ ಕಟ್ಟಿಕೊಟ್ಟು ಸಾಯುವ ಸೈನಿಕನ ಕೋವಿ ಮತ್ತೆ ನನ್ನ ಕೈ ಸೇರಲಿ, ನಾನು ಸೈನಿಕನಾಗಬೇಕು. ಚುಕ್ಕಿಯಾದರೂ ಸರಿಯೇ ಈ ಬಾನ ಬೆಳಕಾಗಬೇಕು..
- ಸಿದ್ದು ದೇವರಮನಿ
ದ ಆರ್ಗ್ಯುಮೆಂಟ್, ಕಂಟಿನ್ಯೂಡ್…
November 28, 2008 at 5:18 am | In ನಿಮ್ಮೊಂದಿಗೆ | 5 CommentsTags: ಭಯೋತ್ಪಾದನೆ
( ನವೆಂಬರ್ ೨೮ರ ಕನ್ನಡ ಪ್ರಭದಿಂದ ಈ ಕೆಳಗಿನ ಸಾಲುಗಳನ್ನು ಕಡ ತರಲಾಗಿದೆ.ಈ ಧಿಕ್ಕಾರ ಘೋಷಣೆಗೆ ನನ್ನದನಿಯೂ ಸೇರಿದೆ. ನಿಮ್ಮ ಪಾಲನ್ನೂ ನೀವು ನೀಡಬಹುದು. )
ಮನುಕುಲ ವಿರೋಧಿ ಉಗ್ರಗಾಮಿಗಳಿಗೆ, ಸಾವಿರ ಭಯೋತ್ಪಾದನೆಗಳಿಂದಲೂ ಪಾಠ ಕಲಿಯದ ಸರ್ಕಾರಗಳಿಗೆ, ಇನ್ನೆಂದೂ ಹೀಗಾಗಲು ಬಿಡೆವು ಎನ್ನುವ ಗಿಳಿಪಾಠದ ರಾಜಕಾರಣಿಗಳಿಗೆ, ಕಠಿಣ ಉಗ್ರ ನಿಗ್ರಹ ಕಾನೂನು ಜಾರಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಗೆ, ಓಟಿಗಾಗಿ ಧರ್ಮವನ್ನು ವಿಬಜಿಸುವ ಮತರಾಕ್ಷಸರಿಗೆ, ಸಂಸತ್ತಿನ ಮೇಲೆ ದಾಳಿ ನಡೆಸಿದವನನ್ನು ಶಿಕ್ಷಿಸಬಾರದೆನ್ನುವ ಮಹಾನುಭಾವರಿಗೆ, ಡೋಂಗಿ ಜಾತ್ಯತೀತವಾದಿಗಳಿಗೆ, ಜಾಳು ಬಾಯಿಯ ಬುದ್ಧಿಜೀವಿಗಳಿಗೆ, ಉಗ್ರರೊಡನೆ ಹೋರಾಡಿ ಮಡಿದ ಅಧಿಕರಿಗಳ ಮೇಲೆ ತನಿಖೆಗೆ ಒತ್ತಾಯಿಸುವ ಅಮಾನವೀಯ ಹಕ್ಕು ಪ್ರತಿಪಾದಕರಿಗೆ, ಮತ್ತು ಈ ಮೊದಲೇ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದೆವು ಎಂದು ಬೆನ್ನು ತಟ್ಟಿಕೊಳ್ಳುವ ಗುಪ್ತದಳಗಳಿಗೆ ಜನ ಸಾಮಾನ್ಯರ ಹಿಡಿಶಾಪ ಮತ್ತು,
ಧಿಕ್ಕಾರ
ಈ ಕೆಳಗಿನದು, ಈ ಲೇಖನದ ಪ್ರತಿಕ್ರಿಯೆಗಳ ಮುಂದುವರೆದ ಚರ್ಚೆಯಾಗಿದೆ.
ಶ್ರೀನಿಧಿ ಡಿ.ಎನ್.-
Corrected…
ಚೇತನಾ,
ನನ್ನ ಪ್ರಕಾರ ಹಿಂದು ಧರ್ಮ, ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ ಇತ್ಯಾದಿ ಧರ್ಮಗಳಲ್ಲಿ ಅದರದರದೇ ಆದ ಶ್ರೇಷ್ಟತೆ, ಆಯಾ ಧರ್ಮಕ್ಕೆ ಸೇರಿದ ಋಣಾತ್ಮಕ ಗುಣಗಳು ಇದ್ದೇ ಇವೆ. ಚರಿತ್ರೆಯ ಆಯಾ ಕಾಲಘಟ್ಟದಲ್ಲಿದ್ದ ಮನುಷ್ಯರಿಂದ, ಅವರ ಕಾರ್ಯಗಳಿಂದ ಒಂದೊಂದು ಧರ್ಮಕ್ಕೆ ಒಂದೊಂದು ಬಣ್ಣ ಅಂಟಿರಬಹುದು. ಆದರೆ, ಇವೆಲ್ಲವೂ ಮನುಷ್ಯ ಧರ್ಮದೊಳಗಿರುವ ಒಳಧರ್ಮಗಳು.
ಆದರೆ ಭಯೋತ್ಪಾದಕರು ಮಾತ್ರ ಯಾವುದೇ ಜಾತಿಗಾಗಲಿ ಧರ್ಮಕ್ಕಾಗಲಿ ಸೇರದವರು, ಎಲ್ಲಾ ಧರ್ಮಗಳು ಮಾನವಹಿಂಸೆಯ ವಿರೋಧವೇ ಇವೆ, be it hindu or muslim or christian. ಧರ್ಮದ ಹೆಸರು ಹೇಳಿಕೊಂಡರೂ ಧರ್ಮದ ನಿಜವಾದ ಹಂಗು ಇವರ್ಯಾರೂ ಇಟ್ಟುಕೊಂಡವರಲ್ಲ, ಹಾಗಾಗಿ ಅವರ ಬಗ್ಗೆ ಹಿಂಧು ಭಯೋತ್ಪಾದಕರು, ಮುಸ್ಲಿಂ ಭಯೋತ್ಪಾದಕರು ಎಂದು ಬೇರ್ಪಡಿಸಿ ಮಾತಾಡುವುದು ನನ್ನ ಪ್ರಕಾರ ತಪ್ಪು. ಅವರೆಲ್ಲರೂ ಒಂದೇ ಜಾತಿಯವರು. ನನ್ನ ಒಂದು ಕಣ್ಣು ಹೋದರೆ ಅವರದು ಎರಡೂ ಕಣ್ಣು ಹೋಗಲಿ ಅನ್ನುವುದು ತುಂಬಾ ಕ್ರೂರ.
ಎಂದೋ ಆಗಿಹೋದ, ನಾವು ನೋಡದ, ನಮ್ಮ ಕಾಲಕ್ಕೆ ನಿಜವಾಗಿ ಸಂಬಂಧಪಡದ ವಿಚಾರಗಳನ್ನು, ಘಟನೆಗಳನ್ನು – ನಾವೇ ನೋಡಿದಂತೆ, ನಮಗೇ ನೇರವಾಗಿ ಸಂಬಂಧಪಟ್ಟಂತೆ, ಪುನ: ಪುನ: ಪೋಸ್ಟ್-ಮಾರ್ಟಂ ಮಾಡುವ ಕೆಲಸ ಕರ್ನಾಟಕದಲ್ಲಿ, ಕನ್ನಡದಲ್ಲಿ ಇತ್ತೀಚೆಗೆ ಅಡೆತಡೆಯಿಲ್ಲದೇ ನಡೆಯುತ್ತಿದೆ. ಆಮೂಲಕ ಇಂದು ಹೇಗೋ ಸರಿಹೋಗಬಹುದಾದದ್ದನ್ನು ಮತ್ತೆ ಹಾಳುಮಾಡುವ ಕೆಲಸ, ಕಟ್ಟುವ ಬದಲು ಕೆಡವುವ ಕೆಲಸ ಮತ್ತೆ ಮತ್ತೆ ನಡೆಯುತ್ತಿದೆ. ನೀವೂ ಅದಕ್ಕೆ ಕೊಡುಗೆ ನೀಡಬೇಡಿ ಅಂತ ನಿಮ್ಮ ಗೆಳತಿಯಾಗಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.
ನನ್ನ ಗೆಳೆಯರೊಬ್ಬರಿದ್ದಾರೆ, ಹೇಳುತ್ತಿರುತ್ತಾರೆ – “ನನ್ನ ಸುತ್ತ ಏನಾದರೂ ನಡೆಯುತ್ತಿದ್ದರೆ ಅದರಲ್ಲಿ ನನ್ನ ಪಾಲೂ ಇದ್ದೇ ಇರುತ್ತದೆ… ನನ್ನಲ್ಲಿರುವ ಕೆಟ್ಟತನ ನನ್ನ ಸುತ್ತ ಕಂಡಾಗ ಅದು ನನ್ನನ್ನು ರೇಗಿಸುತ್ತದೆ… ಯಾಕೆಂದರೆ ಅದು ಕೆಟ್ಟದು ಅಂತ ನನಗೆ ಗೊತ್ತಿರುತ್ತದೆ… ಅದರಿಂದ ಹಿಂಸೆಯಾಗುತ್ತದೆ… ಆ ಹಿಂಸೆಯಿಂದ ನನ್ನಲ್ಲಿರುವ ದೆವ್ವಕ್ಕೆ ಸಂತೋಷವಾಗುತ್ತದೆ… ನನ್ನೊಳಗಿರುವ ದೆವ್ವವನ್ನು ನಾನು ಯಾವಾಗ ಓಡಿಸುತ್ತೇನೋ, ಆಗ ಮಾತ್ರ ನನ್ನ ಸುತ್ತಲ ಜಗತ್ತು ಶಾಂತವಾಗಲು ಸಾಧ್ಯ… selfpurification ಇದ್ದಾಗ ಮಾತ್ರ ನಮ್ಮ ಸುತ್ತ ಶಾಂತಿ ನೆಲಸಲು ಸಾಧ್ಯ…”
ನಾನು ಅವರ ಜತೆ ವಾದ ಮಾಡುತ್ತಿದ್ದೆ, ಅದು ಹೇಗೆ ಸಾಧ್ಯ, ನಾನು ಒಳ್ಳೆಯವಳಾಗಿಬಿಟ್ಟರೆ ಸುತ್ತಲವರು ಒಳ್ಳೆಯವರಾಗಲು ಹೇಗೆ ಸಾಧ್ಯ ಅಂತ. ಅವರು ಹೇಳಿದರು, “ಇಲ್ಲ, ಹಾಗಲ್ಲ, ನೀನು ಒಳ್ಳೆಯವಳಾದರೆ ಒಳ್ಳೆಯದನ್ನೇ ಮಾತಾಡುತ್ತೀ, ಒಳ್ಳೆಯದನ್ನೇ ಮಾಡುತ್ತೀ, ನಿನ್ನನ್ನು ನೋಡುವವರು, ನೀನು ಸೃಷ್ಟಿಸುವ ವಾತಾವರಣದಿಂದ ಪ್ರಭಾವಿತರಾಗುವವರು, ನಿನ್ನಿಂದ ಪ್ರಭಾವಿತರಾಗುವವರು ಹಲವರಿರುತ್ತಾರೆ, ಅವರು ನಿನ್ನನ್ನು ನೋಡಿ ಕಲಿಯುತ್ತಾರೆ… ನೀನು ಒಳ್ಳೆಯದು ಕೊಟ್ಟರೆ ಒಳ್ಳೆಯದೇ ಕಲಿಯುತ್ತಾರೆ, ಕೆಟ್ಟದು ಕೊಟ್ಟರೆ ಅವರೂ ಕೆಟ್ಟವರಾಗುತ್ತದೆ… ಜಗತ್ತಲ್ಲಿ ಎಲ್ಲಾ give and take.. ನಿನ್ನಲ್ಲಿ ಯಾವುದೇ ಕೆಟ್ಟತನವಿಲ್ಲದಾಗ ಜಗತ್ತು ನಿನಗೆ ಕೊಡಬಹುದಾದ ಕೆಟ್ಟತನದ ಪ್ರಮಾಣ ಕಡಿಮೆಯಾಗುತ್ತದೆ…”
ನನಗೆ ಯೋಚನೆ ಮಾಡಿದಾಗ ಇದು ತುಂಬಾ ಸತ್ಯವೆನಿಸಿತು… ನಾನು ಸೆಕ್ಯುಲಾರ್ ಅಂತ ಪೋಸ್ ಕೊಡಲಿಕ್ಕೋಸ್ಕರ ಖಂಡಿತಾ ಈ ವಾದ ಮಾಡುತ್ತಿಲ್ಲ. ನೀವೂ ಯೋಚನೆ ಮಾಡಿ.
~
ಸುಪ್ರೀತ್-
ಅಕ್ಕಾ,
ಭಾರಿ ಜೋರು ಚರ್ಚೆಯನ್ನು ಶುರು ಮಾಡಿರುವಿರಿ. ಇಂತಹ ವಿಷಯಗಳ ಬಗ್ಗೆ ಚರ್ಚೆಯನ್ನು ಶುರು ಮಾಡುವ ಧೈರ್ಯವನ್ನು ತೋರಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿಯೇ.
ನಾನು ಸಂಪದ ಫೋರಮ್ಮಿನಲ್ಲಿ ಈ ಬಗ್ಗೆ ಕೆಲವು ಪ್ರತಿಕ್ರಿಯೆಗಳನ್ನು ಬರೆದಿರುವೆ. ಅವನ್ನು ಇಲ್ಲಿ ಕೊಟ್ಟರೆ ಚರ್ಚೆಗೆ ಸಹಾಯವಾಗಬಹುದು ಎಂದುಕೊಂಡಿರುವೆ.
ಹಿಂದೂ ಭಯೋತ್ಪಾದನೆ ಮುಸ್ಲಿಂ ಭಯೋತ್ಪಾದನೆ ಎಂಬುದರ ಬಗ್ಗೆ-
>> ಭಯೋತ್ಪಾದನೆ ಎಂಬುದಕ್ಕೆ ಧರ್ಮವಿಲ್ಲ. ಹಾಗೆಯೇ ನಮ್ಮ ದೇಶದ ಪೊಲೀಸರು, ಸೇನೆ, ನ್ಯಾಯಾಲಯ, ಮಾಧ್ಯಮ, ರಾಜಕೀಯಕ್ಕೂ ಅದಿರಬಾರದು.
(ವಿ.ಕದಲ್ಲಿನ ಚರ್ಚೆಯ ಬಗ್ಗೆ ಬರೆದ್ದಾದರೂ ಇದು ಇನ್ನೂ ಅನೇಕ ಧರ್ಮ ಸಂಬಂಧಿ ಚರ್ಚೆಗಳ ಬಗ್ಗೆ ಮಾತಡುವುದರಿಂದ ಇಲ್ಲಿ ಕೊಟ್ಟಿರುವೆ.
>> ಭೈರಪ್ಪನವರ ಲೇಖನಕ್ಕಿಂತ ಉಗ್ರವಾಗಿದೆ ನಿಮ್ಮ ಪ್ರತಿಕ್ರಿಯೆ.)
ಇರಲಿ, ಮೂಲಭೂತವಾದ ಪ್ರಶ್ನೆ ಇರುವುದು ಇಲ್ಲಿ… ಹಿಂದೂ ಧರ್ಮದವರು ಯಾರ್ಯಾರು? ಹಾಗೂ ಇಡೀ ಚರ್ಚೆಯಲ್ಲಿ ಕೇವಲ ಮೇಲ್ಜಾತಿಯ ಹಿಂದುಗಳೆನಿಸಿಕೊಂದವರು ಮತಾಂತರವನ್ನು ವಿರೋಧಿಸಿರುವುದು ಏಕೆ? ದಲಿತ ಚಿಂತಕರಾಗಲಿ, ಬ್ರಾಹ್ಮಣರಲ್ಲದ ಇತರ ಬಹುಸಂಖ್ಯಾತರಾಗಲೀ ಅಷ್ಟಾಗಿ ದನಿ ಎತ್ತದಿರುವುದು ಏತಕ್ಕಾಗಿ? ಬ್ರಾಹ್ಮಣರು ತಮ್ಮನ್ನು ತಾವು ಹಿಂದೂ ಧರ್ಮದ ನಾಯಕರು, ಮೌತ್ ಪೀಸ್ಗಳು ಎಂದುಕೊಂಡಿದ್ದಾರೆಯೇ? ಅಥವಾ ಬ್ರಾಹ್ಮಣರು ತಮ್ಮ ಜಾತಿಯನ್ನೇ ಹಿಂದೂ ಧರ್ಮ ಎಂದುಕೊಂಡಿದ್ದಾರೆಯೆ?
ಪೇಜಾವರರು ಮಾತಾಡಿರುವಷ್ಟು ಕಕ್ಕುಲತೆಯಿಂದ ಬಾಲಗಂಗಾಧರರಾಗಲಿ, ಮುರುಗ ಮಠದ ಸ್ವಾಮಿಯವರಾಗಲಿ ಏಕೆ ಮಾತಾಡಿಲ್ಲ? ಇದರ ಬಗ್ಗೆ ಏನೆನ್ನುವಿರಿ?
(ಹಿಂದೂ Vs others ಎಂಬ ಎಲ್ಲಾ ಬಗೆಯ ಚರ್ಚೆಗಳಲ್ಲಿ ನಾನು ಗಮನಿಸಿದ ಸಂಗತಿ)
>> ನನ್ನದು ನೇರವಾದ ಪ್ರಶ್ನೆ. ಹಿಂದೂ ಎಂದರೆ ಯಾರು?
ಮುಸಲ್ಮಾನರೆಂದರೆ ಕುರಾನ್ ಒಪ್ಪುವವರು, ಅಲ್ಲಾಹುವಿನಲ್ಲಿ, ಮೊಹಮ್ಮದ್ರಲ್ಲಿ ನಂಬಿಕೆ ಇಟ್ಟವರು, ಕ್ರೈಸ್ತರು ಬೈಬಲನ್ನು ನಂಬಿ ಯೇಸು ದೇವರ ಮಗ ಎಂದು ಒಪ್ಪಿಕೊಂಡವರು. ಅದರಲ್ಲಿ ನಾನಾ ಪಂಗಡಗಳಿವೆ, ಕೆಲವು ಕಡೆಯಲ್ಲಿ ಹಲವು ಒಡಕುಗಳು ಇವೆ. ಆದರೆ ಹಿಂದೂ ಎಂದರೆ ಯಾರು? ನಿಮ್ಮ ಪ್ರಕಾರ ವೇದಗಳನ್ನು ಒಪ್ಪುವವರು ಹಿಂದೂಗಳೇ(ಅವುಗಳಲ್ಲಿ ಏನಿದೆ ಎಂತಲೇ ಅನೇಕರಿಗೆ ಗೊತ್ತಿಲ್ಲ!)? ವೈದಿಕರು ಹೇಳುವ ಆಚರಣೆಗಳನ್ನು ಮಾಡುವವರೇ? ಯಾರು ಹಿಂದೂಗಳು?ಹಿಂದೂ ಎಂದು ಕರೆದುಕೊಳ್ಳುವವರಿಗೆ ಹುಟ್ಟಿದ ಮಕ್ಕಳು ಹಿಂದುಗಳಾಗುತ್ತಾರೆಯೇ? ಹಾಗಾದರೆ ಇಬ್ಬರು ನಾಸ್ತಿಕರ ಮಕ್ಕಳು ನಾಸ್ತಿಕನಾಗಿಬಿಡಬೇಕು !
ನಾನು ಉಳಿದ ಬಹುಸಂಖ್ಯಾತ ‘ಭಾರತವಾಸಿ’ಗಳಿಗೆ ಇಲ್ಲದ ಉಸಾಬರಿ ವೈದಿಕ ‘ಭಾರತೀಯರಿಗೆ’ ಯಾಕೆ ಎಂದು ಕೇಳಿದ್ದಕ್ಕೆ ಹಿಂದೂ ಎಂದರೆ ಯಾರು ಎನ್ನುವ ಪ್ರಶ್ನೆಯೇ ಮೂಲ.
>>ಸರ್ ನನ್ನದೊಂದು ಪ್ರಾಮಾಣಿಕ ಪ್ರಶ್ನೆ.
ನಾನು ಎಡಪಂಥದವನೂ ಅಲ್ಲ, ಬಲವೂ ಅಲ್ಲ. ಹಿಂದೂ ಚಿಂತನೆ, ಸಂಸ್ಕೃತಿ, ಪರಂಪರೆ ಎಂದರೆ ಯಾವುದು? ಒಂದು ವರ್ಗದ ಜನರು ನೂರಾರು ವರ್ಷಗಳಿಂದ ಹೇಳುತ್ತಾ ಬಂದ ಸಂಗತಿಗಳೇ? ವಿಹಿಂಪ, ಬಜರಂಗ ದಳ ಮುಂತಾದವನ್ನು ಬೆಂಬಲಿಸದವ, ಅವರು ಹೇಳಿದ್ದನ್ನು ಒಪ್ಪದವ ಹಿಂದೂ ಅಲ್ಲವೇ? ಹಿಂದೂ ಆಗುವುದಕ್ಕೂ ಒಂದು ಸಂಸ್ಥೆಯ ಸದಸ್ಯನಾಗುವುದಕ್ಕೂ ವ್ಯತ್ಯಾಸವಿಲ್ಲವೇ? ಸ್ವಯಂ ಘೋಷಿತ ಹಿಂದೂ ಪ್ರತಿನಿಧಿಗಳಾದ ಭೈರಪ್ಪನವರು, ಚಿದಾನಂದ ಮೂರ್ತಿಯವರು, ಪ್ರತಾಪ್ ಸಿಂಹರವರು ಹೇಳಿದ್ದನ್ನು ಒಪ್ಪದ ಕಾರಣಕ್ಕೆ ನಾವು ಅದು ಹೇಗೆ ಹಿಂದುಗಳಾಗುವುದಿಲ್ಲ ದಯವಿಟ್ಟು ತಿಳಿಸಬೇಕು.
ನಾನು ಗಮನಿಸಿರುವಂತೆ ಅನೇಕ ಹಿಂದೂಗಳು ಅಸಹ್ಯ ಪಡುವುದು ಈ ಸ್ವಯಂ ಘೋಷಿತ ಹಿಂದೂ ಪ್ರತಿನಿಧಿಗಳ ಬಗ್ಗೆ. ದ್ವೇಷಿಸುವುದು ಅವರನ್ನೇ ಹೊರತು ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆಯನ್ನಲ್ಲ.
ಮತಾಂಧ ಮುಸ್ಲೀಂ ಸಂಘಟನೆಗಳನ್ನು ಮುಸ್ಲೀಮರು ಉಗ್ರವಾಗಿ ಖಂಡಿಸಬೇಕು ಎಂದು ಹೇಳುತ್ತೀರಲ್ಲವೇ? ಆ ಮತಾಂಧ ಸಂಘಟನೆಗಳು ಅವರ ದೃಷ್ಟಿಯಲ್ಲಿ ಅವರ ಧರ್ಮವನ್ನು ಎತ್ತಿ ಹಿಡಿಯುವ, ಅದರ ಸಂಸ್ಕೃತಿಯನ್ನು ಮೆರೆಸುವ ಉದ್ದೇಶ ಉಳ್ಳವರೇ. ಅವರನ್ನು ವಿರೋಧಿಸುವವರು ನಿಜವಾದ ಮುಸ್ಲೀಮರು, ನಿಜವಾದ ಭಾರತೀಯರು ಆಗುತ್ತಾರೆಂದರೆ ಹಿಂದೂ ಪ್ರತಿನಿಧಿಗಳಾದವರು ಮತಾಂಧರಂತೆ ವರ್ತಿಸುವಾಗ (ಚರ್ಚ್ ಮೇಲೆ ದಾಳಿಯನ್ನು ನಡೆಸಿದವರು ನಾವೇ ಎಂದು ಬಜರಂಗದಳದ ಸಂಚಾಲಕ ಮಾಧ್ಯಮದ ಮುಂದೆ ಹೇಳಿದರೂ ದಾಳಿಗಳು ಪ್ರತಿಕ್ರಿಯೆಯಾಗಿದ್ದವು ಎಂದು ಭೈರಪ್ಪ ಹೇಳಿದಾಗ ) ಅದನ್ನು ವಿರೋಧಿಸದವರು ನಿಜವಾದ ಹಿಂದೂಗಳು ಹೇಗಾಗುತ್ತಾರೆ, ನಿಜವಾದ ಭಾರತೀಯರು ಹೇಗಾಗುತ್ತಾರೆ? ಇಲ್ಲೇ ನಿಮಗೆ ನಿಮ್ಮ ಚಿಂತನೆಯಲ್ಲಿರುವ ಡೈಕಾಟಮಿ ಗೋಚರಿಸಬಹುದು.
ನನ್ನ ಮಾತುಗಳು ಅತಿರೇಕವೆನ್ನಿಸಿದರೆ ಮನ್ನಿಸಿ…
ಭಯೋತ್ಪಾದನೆಯೆಂಬುದೇನು ಹಾಗೂ ಇದಕ್ಕೆ ಧರ್ಮಕ್ಕೆ ಇರುವ ಸಂಬಂಧ ಎಂಥದ್ದು?
>>ಪ್ರತ್ಯೇಕತಾವಾದಕ್ಕೂ ಭಯೋತ್ಪಾದನೆಗೂ ನಾನು ವ್ಯತ್ಯಾಸಗಳನ್ನು ಗುರುತಿಸುತ್ತೇನೆ. ಉಲ್ಫಾದ ಉಗ್ರನೊಬ್ಬ ಬೆಂಗಳೂರಿನಲ್ಲಿ ನಾಲ್ಕು ಬಾಂಬುಗಳನ್ನು ನೆಟ್ಟು ಭಯ ಹರಡುವುದರಿಂದ ಏನನ್ನೂ ಪಡೆಯುವುದಿಲ್ಲ. ಹಾಗೆಯೇ ಎಲ್.ಟಿ.ಟಿ.ಇಯು ಸಹ ತಮ್ಮ ಧ್ಯೇಯೋದ್ದೇಶಕ್ಕೆ ಸಂಬಂಧಿಸದ ಹಿಂಸೆಯಲ್ಲಿ ತೊಡಗುವುದಿಲ್ಲ. ಹೀಗಾಗಿ ಅವನ್ನು, ನಕ್ಸಲೀಯರನ್ನು ಉಗ್ರವಾದಿಗಳು ಎನ್ನಬಹುದು. ಆದರೆ ಭಯೋತ್ಪಾದನೆಗೆ ಅಜೆಂಡಾ ಇರುವುದಿಲ್ಲ. ಭಯ ಉಂಟು ಮಾಡುವುದು ನೆಮ್ಮದಿಯನ್ನು ಕದಡುವುದು ಅಷ್ಟೇ ಅವರ ಉದ್ದೇಶ.
ದುರದೃಷ್ಟವಶಾತ್ ಒಂದು ಭಯೋತ್ಪಾದನೆಯ ಕ್ರಿಯೆಗೆ ಮತ್ತೊಂದಿ ಭಯೋತ್ಪಾದಕ ಪ್ರತಿಕ್ರಿಯೆ ಹುಟ್ಟಿಕೊಂಡಿರುವುದು ಸಮಾಜದ ನೆಮ್ಮದಿಗೆ ಘಾತಕವಾದದ್ದು.
ಟೆರರಿಸ್ಟರನ್ನು ಅವರ ಧರ್ಮದ ಆಧಾರದ ಮೇಲೆ ಗುರುತಿಸುವುದು ನಿಜ. ಆದರೆ ನಮ್ಮ ದೇಶದಲ್ಲಿ ಬಾಂಬು ಸಿಡಿಯುವ ಮೊದಲೇ ಸಿಡಿಸಿದವನು ಈ ಧರ್ಮದವನು ಎಂದು ಗುರುತಿಸಿಬಿಡುತ್ತಾರೆ. ಆ ಮೇಲೆ ತನಿಖೆ, ನಾಲ್ಕು ಮಂದಿಯನ್ನು ಮುಖಕ್ಕೆ ಮುಸುಕು ಹಾಕಿ ಮಾಧ್ಯಮದ ಮಂದಿಗೆ ಪರಿಚಯಿಸುವುದು… ಇವೆಲ್ಲ ನಡೆಯುತ್ತದೆ. ಹೀಗಾಗಿ ಭಯೋತ್ಪಾದನೆಗೆ ಧರ್ಮವಿಲ್ಲ, ಆದರೆ ಭಯೋತ್ಪಾದಕರಿಗೆ ಧರ್ಮವಿದೆ ಎನ್ನಬಹುದು ಏಕೆಂದರೆ ಅವರಿಗೆ ಧರ್ಮವೇ ಭಯೋತ್ಪಾದನೆಯ ಪ್ರೇರಣೆ.
ಪ್ರತ್ಯೇಕತಾವಾದ ಸಾಮಾನ್ಯವಾಗಿ ಭೌಗೋಳಿಕ ಸೀಮೆಯ ತಕರಾರಿಗೆ ಸಂಬಂಧಿಸಿದ್ದು. ಅಲ್ಲಿ ಧರ್ಮದ ಐಡಿಯಾಲಜಿ ಕೆಲಸ ಮಾಡದು. ಹಾಗೆಯೇ ಎಲ್.ಟಿ.ಟಿ.ಇ ನದ್ದು ಎಥ್ನಿಕ್ ತಕರಾರು…
(ಸಾಧ್ವಿ, ಪಾಂಡೆಯವರ ಕೃತ್ಯದ ಸಮರ್ಥನೆಯ ಬಗ್ಗೆ)
>>ನೀವು ತುಂಬಾ ಡಿಸ್ಟರ್ಬ್ ಆಗಿರುವಂತಿದೆ.
ಭಯೋತ್ಪಾದನೆ ಸಾಹಸ ಕೃತ್ಯವಲ್ಲ. ಅದು ಅತಿ ಹೀನ ಹೇಡಿ ಕೃತ್ಯ. ಮರೆಯಲ್ಲಿ ನಿಂತು ಮುಗ್ಧ ಮಕ್ಕಳು, ಮಹಿಳೆಯರು, ಅಮಾಯಕರು ತಮಗೆ ಯಾವ ರೀತಿಯಲ್ಲೂ ಸಮಾನರಲ್ಲದವರ ಮೇಲೆ ಬಾಂಬ್ ಎಸೆದು ಅದನ್ನು ಸಾಹಸ ಕೃತ್ಯ ಎಂದು ಕರೆದುಕೊಳ್ಳುವವರು ವಿಕೃತರು ಅಷ್ಟೇ. ಆತ ಯಾವ ಧರ್ಮದವನೇ ಆಗಿರಲಿ, ಮುಗ್ಧರ ಹತ್ಯೆ, ವಿವೇಕವಿಲ್ಲದ ಅತಿರೇಕ ವಿಕೃತವೇ. ಮಹಮ್ಮದ್ ಅಫ್ಜಲ್ ಗುರುವಿನಷ್ಟೇ ವಿಕೃತರು ಪುರೋಹಿತ್ ಹಾಗೂ ಸಾಧ್ವಿ.
ನಮಗ್ಯಾರಿಗೂ ಅವರು ಹೀರೋಗಳಂತೆ ಕಾಣುತ್ತಿಲ್ಲ. Pardon me!
>> ಸರ್ ನೀವಿನ್ನೂ ವಿಭಜನೆ ನಡೆದ ಕಾಲದಲ್ಲಿದ್ದೀರಿ. ನಮಗೆ ನಿಮ್ಮ ಯಾವ ಪ್ರತೀಕಾರಗಳ ಬಗ್ಗೆಯೂ ಕಾಳಜಿಯಿಲ್ಲ. ನಾನು ಹಾಗು ನನ್ನಂಥವರು ಹುಟ್ಟಿದ್ದು ಗಾಂಧಿ ಗೋಡ್ಸೆಯರೆಲ್ಲಾ ಸತ್ತ ನಂತರ. ನಮಗೆ ನಮ್ಮ ಕಾಲದ ಭಾರತ ಬೇಕು, ಇತಿಹಾಸದ ಕೆಡು ಕನಸುಗಳಲ್ಲಿ ಸಿಕ್ಕು ನಲುಗುತ್ತಿರುವ ಭಾರತವಲ್ಲ.
ಗಾಬರಿಯಾಗಬೇಡಿ, ನಾನು ಅತಿರೇಕಿ ಹಿಂಸೆಯನ್ನು ಬೆಂಬಲಿಸುವಷ್ಟು ಡಿಸ್ಟರ್ಬ್ ಎಂದೂ ಆಗುವುದಿಲ್ಲ
>> ಭಾರತದಲ್ಲಿ ನಡೆದ ಬಾಂಬ್ ಸ್ಪೋಟಗಳನ್ನು ನಡೆಸಿದವರು ಸಮ್ಜೋತಾ ಎಕ್ಸ್ ಪ್ರೆಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನದ ಪ್ರಜೆಗಳು ಎಂದೂ, ಮಲೆಗಾಂವ್ ಸ್ಪೋಟದಲ್ಲಿ ಸತ್ತ ಆರು ಮಂದಿ ಬಾಂಬ್ ಸ್ಪೋಟಗಳ ಹಿಂದಿನ ಮಾಸ್ಟರ್ ಮೈಂಡ್ಗಳೆಂದು ಎಲ್ಲಾದರೂ ವರದಿಯಾಗಿದೆಯೇ?
ಕ್ರಿಯೆಗೆ ಪ್ರತಿಕ್ರಿಯೆಯಂತೆ! ಬಾಂಬ್ ಸಿಡಿದಿದವರು ಯಾರು… ಅದಕ್ಕೆ ಈ ಅವಿವೇಕಿಗಳು(ವಿವೇಕವಿಲ್ಲದವರು) ಪ್ರತೀಕಾರ ತೀರಿಸಿಕೊಂಡದ್ದು ಯಾರ ಮೇಲೆ?
(“ಈಗಿನ ಯುವ ಜನರ ಮನಸ್ಥಿತಿಗೆ ಕನ್ನಡಿ ನೀವು ಎಂದರೆ ತಪ್ಪಿಲ್ಲ. ಕಾರಣ ಕಂಪ್ಯೂಟರ್ ಮುಂದೆ ಕೂತು ವೇದಾಂತಗಳನ್ನು ಎಷ್ಟಾದರೂ ಹೇಳಬಹುದು ಸ್ವಾಮಿ.. ಅದೇ ಮುಸ್ಲಿಮ್ ಭಯೋತ್ಪಾದಕರಿಂದ ನಡೆಯುವ ಬಾಂಬ್ ದಾಳಿಗಳಲ್ಲಿ ನಿಮ್ಮ ಕುಟುಂಬದವರು ಯಾರಾದರು ಸತ್ತಾಗ, ಅದರ ವಿರುದ್ದ ಸರ್ಕಾರವಾಗಲಿ ಅಥವಾ ಯಾರು ಹೋರಾಡದೆ ಹೋದಾಗ ನಿಮಗೆ ಗೊತ್ತಾಗುತ್ತದೆ ಆ ಕಷ್ಟ ಏನು ಅಂತ.” ಎಂಬ ಆರೋಪಕ್ಕೆ ಉತ್ತರ)
>> ನಿಮ್ಮ ಮೊದಲ ವಾಕ್ಯ ಸತ್ಯವಾಗಿದ್ದರೆ ನಮ್ಮ ದೇಶ ಅದೆಷ್ಟು ನೆಮ್ಮದಿಯಿಂದಿರುತ್ತಿತ್ತು ಅಲ್ಲವೇ? ಯಾವುದೋ ಕಾಲದಲ್ಲಿ ನಡೆದ ದೇವಾಲಯ ಧ್ವಂಸ, ನಾವು ಕಂಡಿರದ ವಿಭಜನೆಯ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ನಿಮಗೆ ನಮ್ಮಂತಹ ಯುವಕರ ಬಿಸಿ ರಕ್ತಬೇಕು. ನನ್ನಂತೆ ಎಲ್ಲರೂ ನಮಗೇಕೆ ಬೇಕು ಹಿಂಸೆ ಎಂದಿದ್ದರೆ ಸಾಬರಮತಿ ಎಕ್ಸ್ಪ್ರೆಸ್ಸು ಹೊತ್ತಿ ಉರಿಯುತ್ತಿರಲಿಲ್ಲ, ಗೋಧ್ರಾ ಘಟಿಸುತ್ತಿರಲಿಲ್ಲ, ಇಷ್ಟು ಬಾಂಬುಗಳು ಸಿಡಿಯುತ್ತಿರಲಿಲ್ಲ.
ಇರಲಿ, ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ ನಾವೆಷ್ಟು ಇಲ್ಲಾಜಿಕಲ್ ಆಗುತ್ತೇವೆ ಎಂಬುದಕ್ಕೆ ನೀವು ಮಾಡಿರುವ ಪರ್ಸನಲ್ ರೆಫರೆನ್ಸ್ ಸಾಕ್ಷಿ. ನನ್ನ ಪರಿಚಿತರು, ಗೆಳೆಯರು, ಸಂಬಂಧಿಕರು ಬಾಂಬ್ ಸ್ಪೋಟದಲ್ಲಿ ಸತ್ತರೆ, ನನಗೆ ಸೂಕ್ತ ನ್ಯಾಯ ಸಿಕ್ಕದಿದ್ದರೆ ನಾನೇನು ಮಾಡಬೇಕು? ಇನ್ನಷ್ಟು ಮಂದಿಯ ಬಲಿ ತೆಗೆದುಕೊಳ್ಳಲು ಬಾಂಬು ಸಿಡಿಸಬೇಕೆ? ಒಬ್ಬನ್ಯಾವನೋ ಕಾರಿನವನು ನನ್ನ ತಮ್ಮನನ್ನು ಅಪಘಾತದಲ್ಲಿ ಕೊಂದ ಎಂದರೆ ನಾನು ದೇಶದಲ್ಲಿರುವ ಎಲ್ಲಾ ಕಾರುಗಳ ಗಾಜು ಒಡೆಯಬೇಕೆ?
ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ರನ್ನು ತಪ್ಪು ತಪ್ಪಾಗಿ ಕೋಟ್ ಮಾಡುವ ಮೊದಲು ಅವರ ಬಗ್ಗೆ ಸರಿಯಾಗಿ ತಿಳಿಯಿರಿ. ಒಂದು ಬಾಂಬು ಎಸೆಯುವ ಮೊದಲು ನೂರು ಬಾರಿ ಆಲೋಚನೆ ಮಾಡಿ ಕನಿಷ್ಠ ಹಾನಿಯಾಗುವಂತೆ ಎಸೆದವ ಭಗತ್ ಸಿಂಗ್. ಆತನೇನು ಆಕಾಶದಿಂದ ಇಳಿದು ಬಂದವನಲ್ಲ. ನಮ್ಮಂತೆಯೇ ಇದ್ದ ಒಬ್ಬ ಯುವಕ. ಬಹುಶಃ ಆತ ಈಗ ಇದ್ದರೂ ಹುಚ್ಚುಚ್ಚಾಗಿ ಬಾಂಬು ಸಿಡಿಸಿ ಅಮಾಯಕರನ್ನು ಬಲಿ ತೆಗೆದುಕೊಂಡು ಅದನ್ನು ದೇಶ ಭಕ್ತಿ, ಶೌರ್ಯ ಎಂತೆಲ್ಲಾ ಹೆಮ್ಮೆ ಪಡುತ್ತಿರಲಿಲ್ಲ.
ರಂಗ್ ದೇ ಬಸಂತಿ ಬಗ್ಗೆ ನನಗೆ ಅನೇಕ ತಕರಾರುಗಳಿವೆ. ಬಂದೂಕು ಎಲ್ಲದಕ್ಕೂ ಉತ್ತರವಾಗುವುದಾಗಿದ್ದರೆ ಇಷ್ಟೊತ್ತಿಗೆ ನಾವು ನಕ್ಸಲ್ ಮುಖ್ಯಮಂತ್ರಿಯನ್ನೂ, ಪ್ರತ್ಯೇಕತಾವಾದಿ ಮುಖಂಡ ಪ್ರಧಾನಿಯನ್ನೂ ಹೊಂದಿರಬೇಕಾಗುತ್ತಿತ್ತು.
>>> ನಾವು ಆರಿಸಿ ತಂದಿರುವ ಸರಕಾರದಿಂದ ನಮಗೆ ನ್ಯಾಯ ದೊರೆಯುತ್ತಿಲ್ಲ ಎಂಬುದು ಇಳಿದರೆ ಸರಕಾರವನ್ನು ಇಳಿಸುವ ಶಕ್ತಿಯೂ ನಮ್ಮ ಕೈಯಲ್ಲೇ ಇದೆ. ಹೀಗಾಗಿ ನಾವು ನಮ್ಮ ವ್ಯವಸ್ಥೆಯನ್ನು ಗೌರವಿಸುತಲೇ, ಅದರ ನಿರಂತರತೆಯನ್ನು ಬೆಂಬಲಿಸುತ್ತಲೇ ಬದಲಾವಣೆಗಳಿಗೆ ಕೈ ಹಾಕಬೇಕು. ಮತಾಂತರ ಹೇಗೆ ಸಮಸ್ಯೆಯಾಗುತ್ತಿದೆ ಎಂಬುದನ್ನು ಈ ನಿಟ್ಟಿನಿಂದ ಆಲೋಚನೆ ಮಾಡಿ ತಿಳಿಯುವುದು ಸೂಕ್ತವಾದದ್ದು. ಅಂದರೆ ಮತಂತರದಿಂದ ಸಮಾಜದ ಫ್ಯಾಬ್ರಿಕ್ ಯಾವ ರೀತಿ ಒಡೆಯುತ್ತಿದೆ ಎಂಬುದನ್ನು ನಮ್ಮ ಭೈರಪ್ಪ ಮುಂತಾದ ರಿಸರ್ಚ್ ಬೇಸ್ಡ್ ಬರಹಗಾರರು ವಿವರಿಸಿದ್ದರೆ ಅದಕ್ಕಿಂತ ಶ್ರೇಷ್ಠ ಕಾರ್ಯ ಬೇರೊಂದು ಇರುತ್ತಿರಲಿಲ್ಲ. ಆಗ ಅಪ್ಪನಿಗಿಂತ ಲಕ್ಷಾಂತರ ರೂಪಾಯಿ ಹೆಚ್ಚು ಸಂಪಾದನೆ ಮಾಡುವ ಮಗನನ್ನು ಸೃಷ್ಟಿ ಮಾಡುವ ಆರ್ಥಿಕ ವ್ಯವಸ್ಥೆ, ಹಳ್ಳಿ ಹುಡುಗನ ಬೇರುಗಳನ್ನು ಕತ್ತರಿಸಿ ಹಾಕಿ ಆತನನ್ನು ಹೈದನಿಂದ ನಾಗರೀಕರನ್ನಾಗಿಸುವ ನಗರ ವ್ಯವಸ್ಥೆ, ಶಿಕ್ಷಣ ಪದ್ದತಿ ಎಲ್ಲವನ್ನೂ ಸಹ ನಾವು ಸಮಾಜದ ಫ್ಯಾಬ್ರಿಕ್ ಕೆಡಿಸುವ ಶಕ್ತಿಗಳಾಗಿ ಗುರುತಿಸಬಹುದಿತ್ತು. ಅನಂತರ ಇವೆಲ್ಲಕ್ಕೂ ಪರಿಹಾರವಾಗಬಲ್ಲ ಕಾನೂನು ರೂಪಿಸುವಂತೆ ಆಗ್ರಹಿಸಬಹುದಿತ್ತು. ಆದರೆ ನಮ್ಮಲ್ಲಿ ನಡೆದದ್ದು ತದ್ವಿರುದ್ಧದ ಪ್ರಶ್ನೆ. ಕ್ರೈಸ್ತರು ಎಲ್ಲಾ ವಿಧದಲ್ಲೂ ಹಿಂದೂಗಳಿಗಿಂತ ಕನಿಷ್ಟರು, ಅವರ ಧರ್ಮ ನಮ್ಮದರ ಮುಂದೆ ಏನೂ ಅಲ್ಲ. ಅವರ ಧರ್ಮ ಉಳಿದುಕೊಳ್ಳುವ ಬಾಳುವ ಅರ್ಹತೆಯೇ ಇಲ್ಲದ್ದು. ಅವರು ಮತಾಂತರಿಸುತ್ತಿರುವುದು ತಪ್ಪು ಎಂದು ಎಲ್ಲರೂ ಮಾತನಾಡುತ್ತಿದ್ದಾರೆ.
>>> ನಿಮ್ಮ ವಾದವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಭಾರತದಲ್ಲಿರುವವರೆಲ್ಲರೂ ಹಿಂದೂಗಳು ಎಂಬುದು ನಿಮ್ಮ ವಾದ. ಹಾಗೆ ನೋಡಿದರೆ ಹಿಂದೂ ಯಾವ ಧರ್ಮದವನು ಬೇಕಾದರೂ ಆಗಬಲ್ಲ, ಆತ ಅಲ್ಲಾಹುವನ್ನು , ಯೇಸುವನ್ನು ಪ್ರಾರ್ಥಿಸಬಲ್ಲ ಎಂಬ ಬಗೆಯ ವಾದವನ್ನೊಳಗೊಂಡ ಲೇಖನವನ್ನು ನಾನೇ ಹಿಂದೆ ಬರೆದಿದ್ದೆ. ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿರುವಂತೆ ಹಿಂದೂ ಎನ್ನುವುದು ಒಂದು ಜೀವನ ಪದ್ಧತಿ, ಅದು ಧರ್ಮವಲ್ಲ ಎಂಬುದನ್ನೂ ಒಪ್ಪಿಕೊಳ್ಳೋಣ.
ನಮ್ಮ ದೇಶದಲ್ಲಿರುವುದು ಜಾತಿಗಳು ಮಾತ್ರ. ಧರ್ಮವೆಂಬುದರ ಆವಶ್ಯಕತೆ ನಮಗೆ ಇಲ್ಲ. ಅಲ್ಲದೆ ಒಬ್ಬನೇ ದೇವರು ಇರುವ ಮಾನೊಥಿಸ್ಟಿಕ್ ಧರ್ಮದ ಬೆಳವಣಿಗೆಗೆ ನಮ್ಮ ದೇಶ ಸಹಕಾರಿಯಲ್ಲ. ನಮ್ಮ ಜೀವನ ಪದ್ಧತಿಯೂ ಸಹಕಾರಿಯಲ್ಲ.
ನಿಮ್ಮ ವಾದದ ಪ್ರಕಾರವೇ ಭಾರತೀಯರೆಲ್ಲರೂ ಹಿಂದೂಗಳು ಎಂದು ಹೇಳುವ ಲಾಜಿಕ್ ಬಳಸಿದರೆ ನೇಪಾಳ ಹಿಂದೂ ರಾಷ್ಟ್ರ ಎಂದು ಹೇಳುವುದು ಅಪರಾಧವಾಗುತ್ತದೆ ಏಕೆಂದರೆ ಅದು ಭಾರತದ ಭಾಗವಲ್ಲ. ಅದು ಸರ್ವ ಸ್ವತಂತ್ರವಾದ ರಾಷ್ಟ್ರ. ಹಾಗೆಯೇ ಇತರ ದೇಶಗಳಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿರುವವರನ್ನು ಹಿಂದೂ ಎನ್ನಲು ಸಾಧ್ಯವಿಲ್ಲ. ಅವರ್ಯಾರೂ ಹಿಂದು ಆಗುವುದಿಲ್ಲ.
ಇದು ಅಷ್ಟು ಸುಲಭಕ್ಕೆ ಬಗ್ಗುವ ವಿಷಯವಲ್ಲ ಬಿಡಿ…
ಚೇತನಾ-
ಶ್ರೀ,
ನಿಜವಾಗ್ಲೂ ನನಗೆ ಈಗ ಸಮಾಧಾನವಾಯ್ತು. ಕಳೆದ ಕಮೆಂಟಿನಲ್ಲಿ ನೀವು ವಿಷಯ ವಸ್ತುವಿನ ಬದಲು ನನ್ನವೈಯಕ್ತಿಕತೆಯ ಮೇಲೆ ಆರೋಪ ಮಾಡಿದ್ದಿರಿ. ನನಗದು ಸಹನೆಯಾಗಿರಲಿಲ್ಲ. ಇಷ್ಟು ಸೂಕ್ಷ್ಮವಾಗಿ ವಿವರಣೆ ನೀಡಬಲ್ಲ ನೀವು ಇಲ್ಲಿ ತೆರೆದುಕೊಂಡಿದ್ದು ಸಂತೋಷ. ನೀವು ಇಲ್ಲಿನ ಪ್ರತಿಕ್ರಿಯೆಯಲ್ಲಿ ಮನ ನೋಯಿಸುವ, ಕೆರಳಿಸುವ ಯಾವುದೇ ಮಾತನ್ನು ಆಡದೆ ನಿಮ್ಮ ಸಹಜ – ಸೌಹಾರ್ದ ಚಿಂತನೆಯನ್ನು ಹಂಚಿಕೊಂಡಿದ್ದೀರಿ. ನಿಮಗೆ ನನ್ನ ಎದುರಿಲ್ಲ. ಸಿದ್ಧಾಂತಗಳು ಬೇರೆಬೇರೆಯಾದರೂ ಜೀವ ಪರ ನಿಲುವು ನನ್ನದೂ ನಿಮ್ಮದೂ ಆಗಿದೆ. ಆದರೆ ನೀವು ನನ್ನದನ್ನು ಜೀವ ವಿರೋಧಿ ನಿಲುವೆಂದರೆ ನಾನು ಹೊಣೆಗಾರಳಲ್ಲ. ನನಗೆ ಸ್ವಂತದ ನೆಮ್ಮದಿಯ ಬದುಕಿನೊಂದಿಗೆ ರಾಷ್ಟ್ರದ ಅಸ್ಮಿತೆಯೂ ಮುಖ್ಯವಾಗುತ್ತದೆಯಾದ್ದರಿಂದ ಇಂತಹ ವಿಷಯಗಳಲ್ಲಿ ನನ್ನ ಅಭಿಪ್ರಾಯಗಳನ್ನು ನಿಖರವಾಗಿ ಹೇಳುವ ಪ್ರಯತ್ನ ಮಾಡುತ್ತೇನಷ್ಟೆ.
ಸ್ನೇಹವಿರಲಿ. ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ.
ಸುಪ್ರೀತ್,
ನೀನು ನೀಡಿರುವ ಸಂಭಾಷಣೆ/ ಪ್ರತಿಕ್ರಿಯೆಗಳು ಬಹಳ ಸಹಾಯಕಾರಿಯಾದವು. ಇದನ್ನು ಓದಿದ ಮೇಲೂ ನಮ್ಮ ನಿಲುವನ್ನು ಅರ್ಥೈಸಿಕೊಳ್ಳದೆ ನಮ್ಮನ್ನು ಮತಾಂಧರು ಎಂದು ಯಾರಾದರೂ ಜರಿದರೆ ಅದು ಅವರ ಹಣೆಬರಹ.
ಮೊನ್ನೆ ವಿ.ಕ. ದಲ್ಲಿ ರಾಮಾ ಜೋಯಿಸರ ಲೇಖನ ಓದಿದಾಗ ಜಿಗುಪ್ಸೆ ಹುಟ್ಟಿತ್ತು. ಮಾಲೇಗಾಂವ್ ಸ್ಫೋಟವನ್ನು ಸಮರ್ಥಿಸಿಕೊಂಡು, ಅವರಿಗೆಲ್ಲ ಕ್ರಾಂತಿಕಾರಿಗಳ ಪಟ್ಟ ಕಟ್ಟಿದ್ದು ಸ್ವಲ್ಪ ಕೂಡ ಸರಿಬೀಳಲಿಲ್ಲ. ಅದಕ್ಕೆ ಪ್ರತಿಕ್ರಿಯಿಸಬೇಕನ್ನುವಷ್ಟರಲ್ಲೇ ಈ ಅನಾಹುತ ಮನಸ್ಸನ್ನು ಬೇರೆಡೆಗೆ ತಿರುಗಿಸಿತು.
ಕ್ಲಾರಿಫಿಕೇಶನ್ನು…
ಭಾರತದಲ್ಲಿನ ಭಯೋತ್ಪಾದನೆ ‘ಮುಸ್ಲಿಮ್’ ಭಯೋತ್ಪಾದನೆಯೆಂದು ಕರೆಯಲ್ಪಡುವುದು ಏಕೆ?
ಹೌದು. ಭಯೋತ್ಪಾದಕತೆಯನ್ನು ಜಾತಿವಾರು ವಿಂಗಡಿಸುವುದು ಮೂರ್ಖತನ. ಕ್ರೌರ್ಯಕ್ಕೆ ಜಾತಿಯಿಲ್ಲ ಎನ್ನುವುದು ಸತ್ಯಸ್ಯ ಸತ್ಯ. ಮಾಲೇಗಾಂವ್ ಸ್ಫೋಟವನ್ನು ‘ಭಾರತದ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯೆ’ ಅನ್ನುವುದನ್ನು ಬಿಟ್ಟು ‘ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯೆ’ ಎಂದು ಸಮರ್ಥಿಸಿಕೊಂಡರೆ ಅದು ಹಿಂದೂ ಭಯೋತ್ಪಾದನೆಯಾಗುತ್ತದೆ. ಹಾಗೆಯೇ ಮುಸ್ಲಿಮರು ‘ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯೆ’ ಎಂದು ಸ್ಪೆಸಿಫೈ ಮಾಡಿದಾಗ ಅದು ‘ಮುಸ್ಲಿಮ್ ಭಯೋತ್ಪಾದನೆ’ಯಾಗುತ್ತದೆ. ಯಾಕೋ ಮುಸ್ಲಿಮ್ ಭಯೋತ್ಪಾದಕರು ಹಾದಿ ತಪ್ಪಿದ ಮಕ್ಕಳಂತಾಗಿದ್ದಾರೆ. ಮಾತೆತ್ತಿದರೆ ನಮ್ಮ ಮೇಲಿನ ದೌರ್ಜನ್ಯ ಎನ್ನುತ್ತಾರೆ. ಹಾಗೆಂದು ನಮ್ಮ ಬುದ್ಧಿ ಜೀವಿಗಳೂ ನಿರಂತರವಾಗಿ ನಂಬಿಸಿಕೊಂಡು ಬಂದಿದ್ದಾರೆ. ನಿಜ ಹೇಳಿ. ನಮ್ಮ ಭಾರತದಲ್ಲಿ ‘ಮುಸ್ಲಿಮ್’ ಎನ್ನುವ ಕಾರಣಕ್ಕೆ ದೌರ್ಜನ್ಯ ನಡೆದ ಉದಾಹರಣೆ ಎಷ್ಟಿದೆ? ನಮ್ಮಲ್ಲಿ ದಲಿತರ ಮೇಲೆ, ಬಡ- ಮಧ್ಯಮ ವಅರ್ಗದ ಮೇಲೆ ನಿರಂತರ ಆಘಾತ ನಡೆಯುತ್ತಲೇ ಇವೆ. ಮತ್ತಿದು ಜಾತ್ಯತೀತವಾಗಿ ನಡೆಯುತ್ತಿದೆ ಹೊರತು, ಮುಸ್ಲಿಮ್ ಬಡವ, ಹಿಂದೂ ಬಡವ ಎಂಬ ವಿಂಗಡಣೆಯ ಮೇಲಲ್ಲ. ನಮ್ಮ ದೇಶದ ಅನ್ನ ತಿಂದು, ನಮ್ಮ ದೇಶವಾಸಿಗಳನ್ನೇ ಕೊಲ್ಲುತ್ತಿರುವ ಇವರನ್ನು ಬಂಧಿಸಿದ ಕೂಡಲೆ, ನಮ್ಮ ಮೇಲಿನ ದೌರ್ಜನ್ಯ ಇದು ಎಂದು ಅರಚುವುದು ಯಾವ ನ್ಯಾಯ? ಇದನ್ನು ಸಾವಧಾನದಿಂದ ಚಿಂತಿಸಿ ಉತ್ತರಿಸುವ ವ್ಯವಧಾನ ಭಯೋತ್ಪಾದನೆ ‘ನೊಂದ ಮುಸ್ಲಿಮರ ಕೃತ್ಯ’ ಎಂದು ಸಮರ್ಥಿಸಿಕೊಳ್ಳುವ ಮಂದಿಗೆ ಇದೆಯೇ?
ಭಾರತದ ಜನ ಸಾಮಾನ್ಯರು ಮುಸ್ಲಿಮರನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಾರೆ.
- ಇಂತಹದೊಂದು ಸುಳ್ಳನ್ನು ಮುಸ್ಲಿಮರ ತಲೆಯಲ್ಲಿ ತುಂಬುತ್ತಿರುವ ವಿಷ ಜಂತುಗಳಿಗೆ ಧಿಕ್ಕಾರ. ಈ ಮಾತಿಗೆ ಕೆಲವು ಅಪವಾದಗಳಿವೆ. ತಮ್ಮನ್ನು ತಾವು ‘ಹಿಂದೂ’ಗಳೆಂದು ಕರೆದುಕೊಳ್ಳುವ ಕೆಲವು ಸಂಘಟನೆಗಳು ಭಾರತದ ಮುಸ್ಲಿಮರನ್ನೆಲ್ಲ ಹೊಡೆದೋಡಿಸಬೇಕೆನ್ನುವಂತಹ ಅಸಹ್ಯದ ಮಾತುಗಳನ್ನಾಡುತ್ತಿರುತ್ತಾರೆ. ಅವರಿಗೂ ಧಿಕ್ಕಾರ. ಇಂತಹ ತಲೆಹಿಡುಕರನ್ನು ಸಮಸ್ತ ಭಾರತದ ಪ್ರತಿನಿಧಿಗಳು ಎಂದು ತಮ್ಮಷ್ಟಕ್ಕೆ ತಾವು ಗ್ರಹಿಸಿಕೊಂಡು ಸಮಸ್ತ ಹಿಂದೂಗಳ ಮೇಲೆ ಗೂಬೆ ಕೂರಿಸುವ ಹೊಣೆಗೇಡಿಗಳಿಗೂ ನನ್ನ ಧಿಕ್ಕಾರವಿದೆ.
ಹೀಗೆ ಅರೋಪ ಹೊರಿಸುವವರು ಒಂದು ನಿಮಿಷ ಯೋಚಿಸಬೇಕು. ‘ವಂದೇ’, ‘ಹಿಂದೂ’, ‘ರಾಷ್ಟ್ರ’- ಎಂದೆಲ್ಲ ಮಾತಾಡುವ ಪ್ರತಿಯೊಬ್ಬನನ್ನೂ ‘ಕೋಮುವಾದಿ’ ಎಂದು ಗುರುತಿಸುವಿರಾದರೆ; ‘ಭಯೋತ್ಪಾದಕರನ್ನು ಗಲ್ಲಿಗೇರಿಸಬೇಡಿ’ ಎಂದು ಬೊಬ್ಬೆ ಹೊಡೆಯುವವರನ್ನು, ‘ಕೋಮು ಸೌಹಾರ್ದ’ ಎನ್ನುತ್ತ ಹಿಂದೂಗಳನ್ನು ಅಪಹಾಸ್ಯ ಮಾಡುವವರನ್ನು, ಭಯೋತ್ಪಾದನೆಯ ಸಮರ್ಥಕರನ್ನು ‘ದೇಶ ದ್ರೋಹಿಗಳು’ ಎಂದು ಗುರುತಿಸುವುದರಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ಎರಡೂ ಕಡೆಯಿಂದಲೂ ತಪ್ಪುಗಳು ನಡೆಯುತ್ತಿವೆ. ಎರಡು ಕೈ ಸೇರಿ ಚಪ್ಪಾಳೆ. ಆದರೆ ಇದು, ಚಪ್ಪಾಳೆ ಹೊಡೆಯುತ್ತ ಕೂರುವ ಸಮಯವಲ್ಲ.
Blog at WordPress.com. | Theme: Pool by Borja Fernandez.
Entries and comments feeds.