ಪೊರಕೆ ಎಲ್ಲಿದೆ!? – ಮತ್ತೊಂದು ಚರ್ಚೆ
September 8, 2008 at 9:15 am | In ನಿಮ್ಮೊಂದಿಗೆ | 15 CommentsTags: ಚರ್ಚೆ
‘ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು’ ಲೇಖನದ ವಸ್ತು ನಿಜ ಘಟನೆಯನ್ನ ಆಧರಿಸಿದ್ದು. ಇಲ್ಲಿರುವ ಕೊನೆಯ ಪ್ರಶ್ನೆ, ಪ್ರಾಮಾಣಿಕವಾಗಿ ನನ್ನ ಅಂತರಾಳದ್ದು. ಇದು ನನ್ನನ್ನ ಕಾಡುತ್ತಿರುವುದಕ್ಕೆ ಕಾರಣ ಬಹಳವಿದೆ. ಭಾಷಣ, ಬರಹ ಅಂತೆಲ್ಲ ಶುಚಿಶುಚಿಯ ಚಟುವಟಿಕೆಯಲ್ಲಿ ಮುಳುಗಿಹೋಗುವ ನನಗೆ ಏನೂ ಮಡಲಾರದವಳಾಗಿರುವೆನಲ್ಲ ಎಂಬ ನಾಚಿಕೆ ಕಾಡಿ ಅದನ್ನ ಹೇಳಿಕೊಂಡಾದರೂ ಹಗುರಾಗುವ ಎಂದಿದನ್ನ ಬರೆದೆ. ಇದನ್ನ ಬರೆದಿದ್ದು ಮೇ ತಿಂಗಳಿನಲ್ಲಿ.
ಈ ಲೇಖನ ಕೆಂಡ ಸಂಪಿಗೆಯಲ್ಲಿ ಬಂದು, ಇದೀಗ ನಿಮ್ಮೊಡನೆ ಚರ್ಚಿಸುವ ಸಲುವಾಗಿಯೆ ನನ್ನ ಬ್ಲಾಗಿಗೆ ಹಾಕಿಕೊಂಡೆ. ನೀವು ಕೂಡ ಪ್ರತಿಕ್ರಿಯಿಸುತ್ತಿರುವಿರಿ. ರಾಧಿಕ, ವಿಕಾಸ್, ಸಂದೀಪ್- ಎಲ್ಲರೂ ಚೆನ್ನಾಗಿ ಹೇಳಿದ್ದೀರಿ. ಒಳ್ಳೆಯ ಪ್ರಶ್ನೆ- ಉತ್ತರ ನೀಡಿದ್ದಿರಿ. ಅದಕ್ಕೇ, ಅವು ಕಮೆಂಟು ಬಾಕ್ಸಲ್ಲಿ ಮುಚ್ಚಿಹೋಗಬಾರದೆಂದು ಸಪರೇಟು ಪೋಸ್ಟ್ ಮಾಡಿ ಹಾಕುತ್ತಿರುವೆ. ಸಲಹೆ- ಸೂಚನೆ- ಆಕ್ಷೇಪ ಏನಾದರೂ ಇದ್ದರೆ, ಚರ್ಚೆ ಮುಂದುವರೆಸಿ.
- ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ
Whatever we may talk, write FOR WOMEN when it comes to reality, we would rather be spectators! Your experience (if it’s real) reflects the society in general.
- ರಾಧಿಕಾ
ರಾಧಿಕಾ,
ಇದು ನಿಜವಾಗಿ ನಡೆದಿದ್ದು. ಖಂಡಿತ ಇದು ಒಟ್ಟು ಸಮಾಜದ ಅಸಾಹಯಕತೆ.
ನನ್ನ ಮಟ್ಟಿಗೆ ಕ್ಲಾರಿಫಿಕೇಶನ್ನು ಕೊಡಬಹುದಾದರೆ,ಅಲ್ಲಿ ನನ್ನ ಮಾತಿಗೆ ಬೆಂಬಲ ಕೊಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಸ್ವತಃ ಆ ಹೆಂಗಸು ಕೂಡ! ಆದರೆ ಇಂತಹ ಮಾತುಗಳು ಎಲ್ಲೋ ಕೇವಲ ಸಮಜಾಯಿಶಿಯಾಗಿ ಉಳಿದುಬಿಡುತ್ತದೆ.
ಅದರೂ,
ಬಸ್ಸಲ್ಲಿ ಯಾವನದೋ ಕೈ ಸೋಕಿ ದಿನವಿಡೀ ಮೈಮೇಲೆ ಚೇಳು ಹರಿದಂತೆ ಹೀಕರಿಸಿಕೊಳ್ಳುವ ನಮಗೆ, ಬಸ್ಸಲ್ಲಿ ಅಂಥದೊಂದು ಕಿರುಕುಳಕ್ಕೆ ಒಳಗಾಗಿಯೂ ಕೊನೆಯಲ್ಲಿ, ‘ದುಡ್ ಮಡಗಿ ಹೋಗೋ’ ಎಂದು ಅರಚಿಕೊಳ್ಳುವ ಆ ಹೆಂಗಸಿನಂಥವರ ಅಸಹಾಯಕತೆ, ಅಥವಾ ಅವರ ಮನಸ್ಥಿತಿ ಅರಗಿಸಿಕೊಳ್ಳಲು ಬರುವುದೇ ಇಲ್ಲ.
ಪರಿಸ್ಥಿತಿ ಹೀಗಿರುವುದರಿಂದಲೇ ನನ್ನ ‘ಪೊರಕೆ’ಯ ಹುಡುಕಾಟ ಹಾಗೇ ನಿಂತುಬಿಟ್ಟಿದೆ.
ಈ ಬಗ್ಗೆ ನೀವು ನಿಮ್ಮ ಸಲಹೆ ಕೊಡುವುದಿದ್ದರೆ ಬಹಳ ಒಳ್ಳೆಯದು.
- ಚೇತನಾ
Chetana, I wonder demanding money was her way of protesting against the misbehavior OR her consent for it.
I for one believe every girl should be taught from young age to resist misbehavior by men even if it’s from a family member. My daughter is all of 2.5 years – wouldn’t allow anybody(sometimes including us parents!) to kiss her or pinch her cheeks – as I’ve taught her it’s not good. We need to be equipped to face the world and fight as we cannot eliminate men who are beasts but we can keep them away for sure.
- ರಾಧಿಕಾ
ವಿಕಾಸ್
ದುಡ್ ಮಡಗಿ ಹೋಗೋ’ ಅನ್ನೋದು ಯಾವ ದೃಷ್ಟಿಯಿಂದಲೂ ಅಸಾಹಯಕತೆ ಅಲ್ಲ!
ಇಂಥ ಗಂಡಸರ ಬಗ್ಗೆ ನನಗೂ ಸಿಟ್ಟು ಇದೆ .
ನಂಗೆ ನೀವು ಹುಡುಗಿಯರ ಕಷ್ಟ ಖಂಡಿತ ಅರ್ಥ ಆಗುತ್ತೆ!
ಯಾಕಂದ್ರೆ ನಾವು ’ಗಂಡಸರೂ’ ಇಂಥ ಕಷ್ಟ ಬಸ್ ನಲ್ಲಿ ಅನುಭವಿಸ್ತೀವಿ.ಅದು ’ಗೇ ’ಗಳಿಂದ!
.ನಿಮಗೆ ಇದು ಮಹಾ ಸಮಸ್ಯೆ ಅನ್ನಿಸದಿರಬಹುದು .ಆದ್ರೆ ನಮಗೆ ಇದು ದೊಡ್ಡ ಸಮಸ್ಯೆ .ಯಾಕಂದ್ರೆ ನೀವು ಸ್ವಲ್ಪ ಧೈರ್ಯ ಪಟ್ಟು ಧ್ವನಿ ಎತ್ತಿದ್ರೆ ಅಲ್ಲೇ ಇರೋ ಕೆಲವು ಗಂಡಸರಾದ್ರೂ ಧರ್ಮದೇಟು ನೀಡದೆ ಇರುವುದಿಲ್ಲ ಅಂಥ ಕಾಮುಕರಿಗೆ.ಆದ್ರೆ ನಾವು ಧ್ವನಿ ಎತ್ತಿದ್ರೆ ಯಾರೂ ನಂಬಲ್ಲ ನಮ್ಮನ್ನ
ಇಷ್ಟವಿಲ್ಲದ ಸ್ಪರ್ಷ ಯಾವತ್ತಿದ್ರೂ ಅಸಹ್ಯ ಅಲ್ವ?? (ಅಂದ ಹಾಗೆ ಗೇ ಗಳು ಯಾವ ರೀತಿ ಕಾಟ ಕೊಡುತ್ತಾರೆ ಅನ್ನೋದನ್ನು ಇಲ್ಲಿ ಬರೆಯಲು ಅಸಾಧ್ಯ ! ಅದರ ಕಷ್ಟ ಅನುಭವಿರೋರಿಗೆ ಗೊತ್ತು) ರಾಧಿಕಾ ರವರ ಸಲಹೆ ತುಂಬಾ ಚೆನ್ನಾಗಿದೆ.ಹುಡುಗಿಯರು ಚಿಕ್ಕವರಿರುವಾಗ್ಲೇ ಇಂಥ ಕಿರುಕಳದ ಬಗ್ಗೆ ಸರಿಯಾದ ಮಾಹಿತಿ ನೀಡ್ಬೇಕು .ಬೇಸರದ ಸಂಗತಿ ಅಂದ್ರೆ ಇಂಥ ಕೆಲಸ ಪರಿಚಿತರಿಂದ್ಲೇ ಆಗೋದು !
ಇಲ್ಲಿ ಇನ್ನೊಂದು ವಿಷಯನ್ನು ಗಮನಿಸಬೇಕು ! ಈ ರೀತಿ ಪುಟ್ಟ ಹುಡಿಗಿಯರಿಗೆ ತಿಳುವಳಿಕೆ ನೀಡೋದೇನೋ ಸರಿ ,ಆದ್ರೆ ಇದನ್ನೆ ’ಅಸಹ್ಯ ’ ,ತಪ್ಪು ಅಂತ ಪದೇ ಪದೇ ಹೇಳ್ತಾ ಇದ್ರೆ ಹುಡುಗಿಯರು ಅದನ್ನೇ ಮನಸ್ಸಲ್ಲಿ ಅಚ್ಚೊತ್ತಿ ಬಿಡ್ತಾರೆ ! ಆಮೇಲೆ ಕಷ್ಟ ಪಡೋದು ಗಂಡ ! ಗಂಡನನ್ನು ಕೂಡಾ ಅವರು ಹತ್ತಿರ ಬಿಟ್ಟು ಕೊಡಲ್ಲ !
- ಸಂದೀಪ್ ಕಾಮತ್
@Sandeep, your concern about child developing aversion to ALL people may be true to some extent. BUT the need of the hour is educate the child what is good or bad at that age. Otherwise we may be just mute spectators to violence happening within the family many times.
- ರಾಧಿಕಾ
ಆದರೆ ವಿಕಾಸ್,
ಎಲ್ಲರೂ ಎಲ್ಲಾ ಕಾಲದಲ್ಲೂ ಎಲ್ಲದರ ಬಗ್ಗೆಯೂ ಮಾತಾಡಲು ಸಾಧ್ಯವಿಲ್ಲ ಎನ್ನುವುದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ. ಇಷ್ಟಕ್ಕೂ ‘ಜನರಲೈಸ್’ ಮಾಡುವುದು ಅಂದರೆ ಏನು? ಭಾರತದಲ್ಲಿ ಕುಂತ ರಿಪೋರ್ಟರು ‘ಜಪಾನಲ್ಲಿ ಭಾರೀ ಭೂಕಂಪ’ ಅಂತ ಹೆಡ್ಡಿಂಗ್ ಕೊಟ್ಟರೆ, ಅದನ್ನ ನೀವು ‘ಇಡಿಯ ಜಪಾನ್ ಗಡಗಡ ನಡುಗಿತು’ ಅಂದುಕೊಳ್ತೀರೇನು? ಸಾವಧಾನದಿಂದ ಓದಿದಾಗ ಎಲ್ಲೆಲ್ಲಿ? ಏನು ಸಂಗತಿ? ಎಲ್ಲ ಅರ್ಥವಾಗುವುದು. ಹಾಗೇ ‘ಗಂಡಸು’ ಅಂದಾಗ ಆ ಕಾನ್ಸೆಪ್ಟಿನಲ್ಲಿ, ಆ ಕಥೆ-ಸಂದರ್ಭದಲ್ಲಿ ಬರುವ ‘ಅವನಂಥವರು’ ಎಂದು ಮಾತ್ರ ಅರ್ಥ.
ನಾನು ನಿಮ್ಮನ್ನೊಮ್ಮೆ ಖಂಡಿತ ಭೇಟಿಯಾಗಲೇಬೇಕು. ನೀವು ಸ್ತ್ರೀಪರ ದನಿಯನ್ನು ಅನುಮಾನ ಮತ್ತು ವ್ಯಂಗ್ಯದಿಂದ ನೋಡುತ್ತಿರುವಿರಿ ಎಂದು ನನಗನಿಸುತ್ತಿದೆ. ಪರಸ್ಪರ ಚರ್ಚೆಯಿಂದ ಪೂರ್ವಗ್ರಹಗಳನ್ನು ಸರಿಪಡಿಸಿಕೊಳ್ಳಬಹುದು.
ರಾಧಿಕಾ,
ನಿಮ್ಮ ಸಲಹೆ ಸರಿಯಾಗಿಯೇನೋ ಇದೆ. ಆದರೆ, ಮಗುವಿಗೆ ‘ಸ್ಪರ್ಷ’ದ ಬಗ್ಗೆ ತಿಳುವಳಿಕೆ ನೀಡಲು ಹೋಗಿ ಸಂದೀಪ್ ಹೇಳಿದ ಹಾಗೆ ದ್ವೇಷ ಹುಟ್ಟುವಂತೆ ಆಗದಿರಲಿ ಅನ್ನುವುದಕ್ಕೆ ನನ್ನದೂ ಸಹಮತವಿದೆ.ಮತ್ತೊಂದು ಸಂಗತಿ,ನನ್ನ ಈ ಲೇಖನದ ಚಿಂತನೆ ಬಸ್ಸಿನ ಹೆಂಗಸಿನ ಕುರಿತಾದದ್ದು ಅನ್ನುವುದು ಎಂದು ಸ್ಪಷ್ಟ ಪಡಿಸಬಯಸುತ್ತೇನೆ. ಆಕೆಯಂಥ, ಅಂತಹ ಹಿನ್ನೆಲೆಯ (ಅವರು ಸದಾ ಊರೂರು ಅಲೆಯುತ್ತ ಕೆಲಸ ಮಾಡುವ ಜನ) ಹೆಣ್ಣುಮಕ್ಕಳನ್ನ ಯಾರು, ಹೇಗೆ ಎಜುಕೇಟ್ ಮಾಡಬಹುದು? ದಿಕ್ಕು ದೆಸೆ ಇಲ್ಲದವಳಾದರೂ ಸಹ ಅಕೆಗೆ ತನ್ನತನ ಇದ್ದೇ ಇರುತ್ತದೆ. ಯಾವನದೋ ಮುಟ್ಟುವಿಕೆ ಅಸಹ್ಯ ತರಿಸಿದರೂ ಅವಳು ತನ್ನ ‘ಅಂತರಂಗ’ದ ಭಾವ ಸರಿಯಾಗಿ ವ್ಯಕ್ತಪಡಿಸಲಾರದವಳಾಗಿರು ತ್ತಾಳೆ. ಇಲ್ಲಿ ನನಗೆ ಆಕೆಯ ಸ್ಥಿತಿಯ ಬಗ್ಗೆ ಮರುಕವಿದೆ. ಆದರೆ, ಅದಕ್ಕೊಂದು ಪರಿಹಾರ ಹುಡುಕುವ ದಾರಿ ಗೊತ್ತಿಲ್ಲ. ಇಂತಹ ನನ್ನ ಸೋಲಿನ ಬಗ್ಗೆಯೂ ನನಗೆ ಮರುಕವಿದೆ.
ನಾನು ಬಿಳಿ ಸೀರೆಯ (ಅಂದರೆ ಇಲ್ಲಿ ಸೂಚ್ಯವಾಗಿ ನಾಗರಿಕ ಅಥವಾ ವೈಟ್ ಕಾಲರ್ ಅರ್ಥದ) ಹುಡುಗಿಯರಿಗೆ ಭಾಷಣ ಮಾಡಿ ನಮ್ಮ ಸಂಸ್ಕೃತಿಯ ಬಗ್ಗೆ ಹೇಳಬಲ್ಲೆ. ಆತ್ಮ ರಕ್ಷಣೆ, ಆತ್ಮಾಭಿಮಾನದ ಬಗ್ಗೆ ಭಾಷಣ ಬಿಗಿಯಬಲ್ಲೆ. ಲೇಖನದ ಕೊನೆಯಲ್ಲಿನ ಅಮ್ಮನ ಮಾತಿನಂತೆ ಹಾಲುಕರೆಯುವ ಕೆಲಸ ನನ್ನದು. ಯಾವುದೇ ರಿಸ್ಕಿಲ್ಲದ, ಶ್ರಮವಿಲ್ಲದ ಕೆಲಸ! ಆದರೆ ಕೊಟ್ಟಿಗೆ ಗುಡಿಸುವುದು? ತಾನು- ತನ್ನ ಪಾಡಿನ, ಅನಕ್ಷರಸ್ತ ಕೂಲಿ ಹೆಂಗಸಿನ- ಅಂತಹವರ ದನಿಯಾಗಬೇಕೆನ್ನುವ ಹಂಬಲವಿದ್ದರೂ ದಾರಿ ತಿಳಿಯದೆ ಹೋಗಿದೆ ಅನ್ನುವುದೇ ನನ್ನ ಕೊರಗು.
- ಚೇತನಾ
– ರಾಧಿಕಾ
ಇಷ್ಟ ಇದ್ರೆ ಕುಡುಕ ಮುಟ್ಟಿದ್ರೂ ಮೈಯೆಲ್ಲ ರೋಮಾಂಚನ
ಇಷ್ಟ ಇಲ್ಲ ಅಂದ್ರೆ ಶಾರೂಕ್ ಖಾನ್ ಮುಟ್ಟಿದ್ರೂ ಅಷ್ಟೆ ಸಲ್ಮಾನ್ ಖಾನ್ ಮುಟ್ಟಿದ್ರೂ ಅಷ್ಟೆ!
ಸಂದೀಪ್
ಅಕ್ಕಾ,
ಕೊಂಚ ತಡವಾಗಿ ನಿಮ್ಮ ಬ್ಲಾಗನ್ನು ತಾಕಿದೆ.
ಚರ್ಚೆ ಶುರು ಮಾಡಿ ಸಾವಕಾಶವಾಗಿ, ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗುವ ನಿಮ್ಮ ಕೌಶಲ್ಯ ಮೆಚ್ಚುಗೆಯಾಗುತ್ತದೆ.
ಹಿಂದೆಲ್ಲಾ ಹೆಣ್ಣಿನ ಬಗ್ಗೆ ಚರ್ಚೆ ನಡೆಸುವಾಗ, ಹೆಣ್ಣಿನ ಹಕ್ಕು, ಹೆಣ್ಣಿನ ಸ್ಥಾನಮಾನ, ಸಮಾನತೆಯ ಬಗ್ಗೆ ಚರ್ಚೆ ನಡೆಯುವಾಗ ನಾನು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದೆ ಎಂಬುದನ್ನು ಹೇಳುತ್ತೇನೆ. ಇದಕ್ಕೆ ನನಗೆ ಸರಿಯಾದ ಉದಾಹರಣೆಯಾಗಿ ಇನ್ನೊಂದು ಬಗೆಯ ಚರ್ಚೆ ಸಹಾಯಕ್ಕೆ ಬರಬಹುದು ಎಂದು ಭಾವಿಸುತ್ತೇನೆ. ಈಗ ಎರಡು ಕೋಮುಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದುಕೊಳ್ಳಿ. ನಾನು ಹಿಂದೂ, ಚರ್ಚೆಯಲ್ಲಿನ ಇನ್ನೊಂದು ಕೋಮು ಮುಸ್ಲೀಮರದು ಎಂದುಕೊಳ್ಳೋಣ. ನಾನು ಎಷ್ಟೇ ಪ್ರಾಮಾಣಿಕನಾಗಿದ್ದರೂ, ಇನ್ನೊಬ್ಬನ ವಾದದಲ್ಲಿನ ಸತ್ವವನ್ನು ಗುರುತಿಸುವ ಎಚ್ಚರವನ್ನು ಹೊಂದಿದ್ದರೂ ಸಹ ನಾನು ‘ನನ್ನ ಧರ್ಮ ಆತನದ್ದಕ್ಕಿಂತ ಉದಾತ್ತವಾದದ್ದು, ಶ್ರೇಷ್ಠವಾದದ್ದೆ, ಆರ್ಷೇಯವಾದದ್ದು, ಪುರಾತನವಾದದ್ದು, ಜಗತ್ತಿನ ನನ್ನ ಧರ್ಮದಿಂದ ಸಿಕ್ಕ ಕೊಡುಗೆ ದೊಡ್ಡದು’ ಎಂಬ ಭಾವದಿಂದ ಹೊರಬಂದು ಚರ್ಚಿಸಲು ಸಾಧ್ಯವಾಗದು.
ಇದು ಒಂದು ಸಮಸ್ಯೆ. ಮತ್ತೊಂದು ಸಮಸ್ಯೆಯೆಂದರೆ, ಕೆಲವೊಮ್ಮೆ ನನ್ನ ಧರ್ಮದ ಬಗೆಗಿನ ಹೆಮ್ಮೆಯ ಭಾವವನ್ನು ತಗ್ಗಿಸಿಕೊಂಡು, ನಾನು ಕೊಂಚ ಇನ್ ಫೀರಿಯರ್ ಆಗಿ, ನನ್ನಿಂದಲೇ ತೊಂದರೆ ನಡೆಯುತ್ತಿದೆ ಎಂದು ಒಪ್ಪಿಕೊಂಡು ಚರ್ಚೆಗೆ ಅನುವಾದರೆ ನನ್ನೊಂದಿಗೆ ವಾದಿಸುವ ಮುಸ್ಲೀಮನು ತನ್ನ ಧರ್ಮವೇ ಶ್ರೇಷ್ಠ, ತನ್ನ ದೇವರೊಬ್ಬನೇ ಸತ್ಯ, ತನ್ನ ಧಾರ್ಮಿಕ ಗ್ರಂಥವೊಂದೇ ದೇವರಿಂದ ಬಂದದ್ದು, ಉಳಿದವರೆಲ್ಲಾ ಅಪವಿತ್ರರು ಎಂಬ ಭಾವದಿಂದ ಬಿಡುಗಡೆ ಪಡೆದು ಮಾತನಾಡುತ್ತಿದ್ದಾನೋ ಇಲ್ಲವೋ ಎಂಬ ಸಂಶಯ ಬರುತ್ತದೆ. ಒಮ್ಮೆ ಆ ಅನುಮಾನ ಬಂದಾಗ ನಾನು ನನ್ನೆಲ್ಲಾ ಅಭಿಮಾನ, ಹೆಮ್ಮೆಯನ್ನು ಬಿಟ್ಟು, ತಪ್ಪು ನನ್ನಲ್ಲೇ ಇರಬಹುದು ಎಂದು ಪ್ರಾಮಾಣಿಕನಾಗಿ ವಾದಕ್ಕೆ ಬಂದದ್ದು ನನ್ನ ಅಸಹಾಯಕತೆಯಾಗಿವಿಡುತ್ತದೆ. ಯುದ್ಧದಲ್ಲಿ ಎಲ್ಲಾ ಶಸ್ತ್ರಾಸ್ತ್ರ ಬಿಟ್ಟು ಬರಿಗೈಲಿ ನಾನು ಹೋರಾಟಕ್ಕೆ ಹೋದಾಗ ಎದುರಾಳಿ ನನಗೆ ತಿಳಿಯದೆ ಬೆನ್ನ ಹಿಂದೆ ಕತ್ತಿ ಅಡಗಿಸಿಕೊಂಡಿರಬಹುದಾ ಎಂಬ ಸಂಶಯದಂತೇ ಇದು. ಆಗ ನಾನು ನನ್ನ ರಕ್ಷಣೆಗೆ ನನ್ನ ಧರ್ಮದ ಅಭಿಮಾನ, ಹೆಮ್ಮೆ, ಪ್ರತಿಷ್ಠೆ ಎಂಬ ಕವಚವನ್ನಿಟ್ಟುಕೊಂಡೆ ಮುಂದುವರೆಯುತ್ತೇನೆ. ನಾನು ಹೀಗೆ ಎಚ್ಚರನಾಗಿರುವುದಕ್ಕೆ ಎದುರಾಳಿಯಲ್ಲಿನ ಹುಳುಕುಗಳೇ ಕಾರಣ ಎಂದು ವಾದಿಸುತ್ತೇನೆ.
ಬಹುಶಃ ಇದೇ ಅನಿಸಿಕೆ ಹೆಣ್ಣಿನ ಬಗ್ಗೆ ಹೆಣ್ಣು ಹಾಗೂ ಗಂಡಿನ ನಡುವೆ ನಡೆಯುವ ಚರ್ಚೆಗಳಲ್ಲಿ ಆವರಿಸಿರುತ್ತದೆ ಅನ್ನಿಸುತ್ತದೆ. ನನ್ನ ನಿಲುವಿನ ಬಗ್ಗೆ, ನನ್ನ ನಿಲುವಿನಲ್ಲಿನ ಪ್ರಾಮಾಣಿಕತೆಯ ಬಗ್ಗೆ ಸ್ಪಷ್ಟತೆ ಪಡೆಯದೆ ಯಾವ ಚರ್ಚೆಯನ್ನೂ ಮಾಡಬಾರದು ಎಂಬ ಕಾರಣದಿಂದ ಇಷ್ಟು ಹೇಳಿದೆ.
ಇನ್ನು ನೀವು ಪ್ರಸ್ತಾಪಿಸಿರುವ ಘಟನೆಯನ್ನು ಅವಲೋಕಿಸಿದರೆ ನನಗೆ ಒಂದು ಸಂಗತಿಯ ಬಗ್ಗೆ ಆಶ್ಚರ್ಯವಾಯ್ತು. ಅಭಿವ್ಯಕ್ತಿಯನ್ನು ಆಯ್ದುಕೊಂಡವರು, ಅಂದರೆ ಬರಹಗಾರರು, ಮಾತುಗಾರರು, ಚಿಂತಕರು, ಪತ್ರಕರ್ತರು, ಹೋರಾಟಗಾರರು ಇಡೀ ಸಮಾಜದ ಧ್ವನಿಯಾಗಲು ಹವಣಿಸುವುದು ಏತಕ್ಕೆ? ಧ್ವನಿಯಿಲ್ಲದವರಿಗೆ ಧ್ವನಿಯಾಗುವುದು ಎಂಬುದರಲ್ಲೇ ‘ನಮ್ಮ ಗಂಟಲಿನ’ ಅಹಂಕಾರ ಬೆರೆತಿರುತ್ತದಾ ಎಂಬ ಸಂಶಯ ನನ್ನದು. ಹಲವು ಸಂದರ್ಭದಲ್ಲಿ ನನಗೆ ಇಂಥ ಅನುಭವವಾದದ್ದಿದೆ. ಟ್ರೈನಿನಲ್ಲಿ ಕೂತು ಒಬ್ಬ ಸಿಗರೇಟು ಹೊತ್ತಿಸಿರುತ್ತಾನೆ. ಟ್ರೇನಿನಲ್ಲಿ ಸಿಗರೇಟು ಸೇದುವುದು ಅಪರಾಧ, ಅದಕ್ಕೆ ದಂಡವಿದೆ ಎಂಬ ಮಾಹಿತಿ ನನಗಿದೆ. ನಾನು ಆತನಿಗೆ ಅದನ್ನು ಆರಿಸುವಂತೆ ಹೇಳಬೇಕು. ಹಾಗೆ ಹೇಳಿದರೆ ಆತ ಏನು ಹೇಳಬಹುದು, ಉಳಿದವರು ನನ್ನ ನೆರವಿಗೆ ಬರುತ್ತಾರಾ? ನಾನು ಒಬ್ಬಂಟಿಯಾದರೆ ಹೇಗೆ? ಎನ್ನಿಸತೊಡಗುತ್ತದೆ. ಇದಕ್ಕೆ ಕಾರಣ ನಾನು ಅಲ್ಲಿ ರೇಲ್ವೆ ಬೋಗಿಯಲ್ಲಿದ್ದವರೆಲ್ಲರ ಪರವಾಗಿ ಮಾತನಾಡಬೇಕು ಎಂದು, ಅವರೆಲ್ಲರ ನೈತಿಕ ಪ್ರಜ್ಞೆಯಾಗಬೇಕು ಎಂದು ಭಾವಿಸುವುದು. ಸುಮ್ಮನೆ ನಾನು ಒಬ್ಬ ಸಾಮಾನ್ಯ ಮನುಷ್ಯನಾಗಿ ಆತನಿಗೆ ‘ಆರಿಸಯ್ಯಾ ಸಿಗರೇಟು, ಕಾಣಲ್ವಾ ಕೂತಿರೋದು’ ಎಂದು ಹೇಳುವುದಕ್ಕೆ, ಅದನ್ನು ವೈಯಕ್ತಿಕ ನೆಲೆಯಲ್ಲಿ ನಿಭಾಯಿಸುವುದಕ್ಕೆ ಏಕೆ ಸಾಧ್ಯವಾಗದು ಎಂದು ಯೋಚಿಸಿದ್ದೇನೆ. ಅಲ್ಲೇ ಪಕ್ಕದಲ್ಲಿ ಕೂತಿದ್ದ ಕೂಲಿ ಹೆಂಗಸೊಬ್ಬಳು ದಬಾಯಿಸಿ ಸಿಗರೇಟು ಬಂದ್ ಮಾಡಿಸಿದಾಗ ನಾನು ಆಕೆಯ ವ್ಯಕ್ತಿತ್ವದಲ್ಲಿ ಹೇಗೆ ಅಂಥ ಗಟ್ಟಿತನ ಬಂತು, ನಾಯಕನಾಗುವನಿಗೆ ಇಂಥ ಗಟ್ಟಿತನ ಎಷ್ಟು ಆವಶ್ಯಕ ಎಂದು ಯೋಚಿಸುತ್ತಾ ಕೂತುಬಿಡುತ್ತೇನೆ.
ಪ್ರತಿಕ್ರಿಯೆ ದೀರ್ಘವಾಯ್ತು, ಅಪ್ರಸ್ತುತ ಅನ್ನಿಸಿದರೆ ಕಟ್ ಮಾಡಿಬಿಡಿ!
-ಸುಪ್ರೀತ್
Bottom line is most of the times, we are paper tigers being mute spectators to what happens around us
- ರಾಧಿಕಾ
ಮೊದಲಿಗೆ, ಸಂದೀಪರ ಮಾತಿಗೆ ಸಹಮತ. ನಂಗೆ ಅಮೃತ ಮತಿ ನೆನಪಾಯ್ತು. ಆದ್ರೆ, ಆ ಕಥೆಯ ಹಿಂದಿನ ಸೈಕಾಲಜಿಯೇ ಬೇರೆ ಅಲ್ವಾ?
ಸುಪ್ರೀ,
ನೀನು ಹೇಳಿದೆಯಲ್ಲ, ರೈಲುಬೋಗಿಯ ಎಕ್ಸಾಂಪಲ್ಲು, ನನ್ನದೂ ಅದೇ ಹಣೆಬರಹ. ಮತ್ತು ಮೊದಲಲ್ಲಿ ನೀ ಹೇಳಿದ ಹಾಗೆ “ಎಲ್ಲರೂ ಎಲ್ಲವನ್ನೂ ಯಾಕೆ ಹೇಳಲೇಬೇಕು?”ಅನ್ನುವ ಪ್ರಶ್ನೆ ನಂದೂ ಕೂಡ. ಆದ್ರೂ ಕೆಲವೊಂದ್ ಸಾರ್ತಿ ನಮ್ಮ ಅಸಹಾಯಕತೆ, ಸೀಮಿತತೆಗಳು ಒಳಗೊಳಗೆ ಪೀಡಿಸಲು ಶುರುವಿಡುತ್ತವೆ. ಈ ಘಟನೆ ಖುದ್ದು ಆ ಹೆಂಗಸಿಗೇ ನೆನಪಿದೆಯೋ ಇಲ್ಲವೋ? ಅಥವಾ ಇಂಥದನ್ನು ಅವಳೆಷ್ಟು ನುಂಗಿ ನೊಣೆದಿರುವಳೋ? ನಾನು ಮಾತ್ರ ಅದನ್ನು ನೆವವಾಗಿಟ್ಟುಕೊಂಡು ಪಾಠ ಕಲಿಯುತ್ತಿರುವೆ. ಎಲ್ಲವನ್ನೂ ಮಾಡಿಬಿಡಬೇಕೆನ್ನುವ, ಮಾಡುವೆನೆನ್ನುವ ಭ್ರಮೆ ನನಗಿಲ್ಲವಾದರೂ ಹಾಗೆ ನೋಡಿಕೊಂಡು ಸುಮ್ಮನುಳಿಯುವ ನಿರ್ಲಿಪ್ತತೆಯೂ ಇಲ್ಲದಿರುವುದೇ ಸದ್ಯದ ಸಮಸ್ಯೆ. ನನಗೆ ಗೊತ್ತು, ಮನಸ್ಸು ಇನ್ನೂ ಸಾಕಷ್ಟು ಪ್ರೌಢವಾಗದ ಕಾರಣ ಇಂಥದೆಲ್ಲ ಆಲೋಚನೆಗಳು ಹುಟ್ಟಿ ನಮ್ಮ ತಲೆ ಮೇಲೇ ಬೀಳುತ್ತಿದೆಯೇನೋ ಎಂಬ ಚಿಂತನೆಗೆ ನಮ್ಮನ್ನು ದೂಡುತ್ತವೆಯೆಂದು!
ನೀನು ಶುರುವಲ್ಲಿ ಹಾಕಿದ ಪೀಠಿಕೆ ಸರಿಯಾಗಿದೆ. ಅದನ್ನು ನಾನು ಸ್ವಲ್ಪ ತಿರುಚಿ ಔಟ್ ಆಫ್ ದ ಸಬ್ಜೆಕ್ಟ್ ಮಾಡಬಹುದಾದರೆ, ‘ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಭಯೋತ್ಪಾದಕರಲ್ಲಿ ಬಹುತೇಕರು ಮುಸ್ಲಿಮರೇ’ ಎನ್ನುವ ಮಾತು ಹೇಳುವಾಗ ನಡೆಯುವ ಕೋಲಾಹಲವನ್ನು ಗಮನಿಸಬೇಕು. ಈ ಮಾತನ್ನು ಅದು ಯಾರೇ ಹೇಳಿದರೂ (ಒಬ್ಬ ಹಿಂದೂ ಹೇಳಿದರೆ ಆತ ‘ಕೋಮುವಾದಿ’ ಎಂದು ಗುರುತಿಸಲ್ಪಡುವನು, ಮುಸ್ಲಿಮನೆ ಹೇಳಿದರೆ ‘ಕಾಫಿರ’ನಾಗುವನು) ಪಾರ್ಥ ತಪ್ಪಿದ್ದಲ್ಲ.
ಹಾಗೆಯೇ,
ಹೆಂಗಸರ ಬಗ್ಗೆ ಯಾರೇ ಮಾತಾಡಲಿ, ಅವರನ್ನು ‘ಸ್ತ್ರೀವಾದಿ’ ಎಂದು ಕರೆದು ‘ಸ್ತ್ರೀವ್ಯಾಧಿ’ ಎಂದು ಕುಹಕವಾಡುವುದು; ಗಂಡಸರು ಮಾತಾಡಿದರೆ ‘ಮಹಿಳಾಪರ ಕಾಳಜಿ’ ಎಂದು ದ್ವಂದ್ವಾರ್ಥ ಹೊರಡಿಸುವುದು ಸಾಮಾನ್ಯ.
ಆದರೆ, ಈ ಲೇಖನದಲ್ಲಿ ನಾನು ಹೆಂಗಸಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕಿಂತ ಹೆಚ್ಚಾಗಿ ಆಕೆಯನ್ನು ಒಂದು ವರ್ಗದ ಪ್ರತಿನಿಧಿಯಾಗಿ ತೆಗೆದುಕೊಂಡು ಅದರ ಹಿಂದಿನ ಕಷ್ಟ ಸುಖಗಳ ಬಗ್ಗೆ ಯೋಚಿಸಲು ಹೊರಟಿದ್ದೆ. ಅದಕ್ಕೇ, ಬಿಳಿ ಸೀರೆ/ಪಂಚೆಯ ಹುಡುಗ- ಹುಡುಗಿಯರು ಮತ್ತು ಬಸ್ಸಿನ ಹುಳ್ಳಗಿನ ಜನರು ನನಗೆ ಬೇರೆ ಬೇರೆ ಲೋಕದವರಾಗಿ ಕಂಡರು. ಜೊತೆಗೇ, ನನ್ನ ಜಗತ್ತು ನಾನು ಕಂಡಷ್ಟು ಮಾತ್ರವಾಗಿಬಿಟ್ಟಿತ್ತಲ್ಲ! ಎಂದು ಸೋಜಿಗವೂ ಆಯಿತು.
ಹೌದಲ್ವಾ? ನಮ್ಮ ಜಗತ್ತು, ಅನುಭವ ಅದೆಷ್ಟು ಸೀಮಿತ!
(ಕ್ಷಮೆಯಿರಲಿ. ಸುಪ್ರೀತ್ ಮಾತಿಗೆ ಸಿಕ್ಕುಬಿಟ್ಟರೆ ನಾನಂತೂ ಸದ ಔಟ್ ಆಫ್ ಟಾಪಿಕ್ ಹೊರಟುಬಿಡ್ತೀನಿ. ಇದ್ರಲ್ಲಿ ನನ್ ತಪ್ಪೇನೂ ಇಲ್ಲ!)
Blog at WordPress.com. | Theme: Pool by Borja Fernandez.
Entries and comments feeds.