ಒಂದು ಮಡಚಿಟ್ಟ ಪುಟ : Draft Mail – 5

ಚಿನ್ಮಯಿಯ mail boxನ draft folderನಲ್ಲಿ ಅವಳ ಬದುಕಿನ ಕೆಲವು ಮಹತ್ವದ ಸಂಗತಿಗಳು ದಾಖಲಿವೆ. ಮಡಚಿಟ್ಟ ಪುಟಗಳಂತೆ. ಬದುಕು ಇರುವುದು ತೆರೆದಿಟ್ಟ ಪುಸ್ತಕದಲ್ಲಿ ಅಲ್ಲ… ಈ ಹೇಳದೇ ಉಳಿದ ಮಾತುಗಳಲ್ಲಿ… ಈ ಮಾತುಗಳ ಸ್ವಗತವೇ Draft mail : ಅರೆಬರೆ ಕಾದಂಬರಿ. ಇದು ಕಾದಂಬರಿಯ ಐದನೇ ಕಂತು. ಚಿನ್ಮಯಿ ನಿರಾಳವಾಗಿದ್ದಾಳೆ. ಬೆಳಕು ಬಾಗಿಲಿನಾಚೆ ಹೋಗುತ್ತಿದ್ದರೂ ಒಳಗಿನ ಕತ್ತಲು ಮಾಯವಾಗಿದೆ. ಅವಳ ಒಳಗಿನ ಕತ್ತಲು… ಆಡದೆ ಉಳಿಸಿಕೊಳ್ಳುವ ಮಾತು ಹೇಗೆಲ್ಲ ಜೀವ ಹಿಂಡುತ್ತೆ! ಡ್ರಾಫ್ಟ್ ಮೇಲ್ ಕಳಿಸುವವರೆಗೂ ಅವಳಿಗೆ ತಾನು... Continue Reading →

ಬಟವಾಡೆಯಾಗದ ಪತ್ರ ಮತ್ತು ಗೌತಮ # 2 : Draft Mail – 4

ಚಿನ್ಮಯಿಯ mail boxನ draft folderನಲ್ಲಿ ಅವಳ ಬದುಕಿನ ಕೆಲವು ಮಹತ್ವದ ಸಂಗತಿಗಳು ದಾಖಲಿವೆ. ಮಡಚಿಟ್ಟ ಪುಟಗಳಂತೆ. ಬದುಕು ಇರುವುದು ತೆರೆದಿಟ್ಟ ಪುಸ್ತಕದಲ್ಲಿ ಅಲ್ಲ… ಈ ಹೇಳದೇ ಉಳಿದ ಮಾತುಗಳಲ್ಲಿ… ಈ ಮಾತುಗಳ ಸ್ವಗತವೇ Draft mail : ಅರೆಬರೆ ಕಾದಂಬರಿ. ಇದು ಕಾದಂಬರಿಯ ನಾಲ್ಕನೇ ಕಂತು. To: editor@kt.com ವಿಷಯ: ನಿಮ್ಮ ಪತ್ರಿಕೆಯ ಪಕ್ಷಪಾತ ಧೋರಣೆ ಕುರಿತು ನಮಸ್ತೇ ಗೋಧ್ರಾ ಹಿಂಸಾಚಾರ ಕುರಿತು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿದೆ. ನೀವು ಗೋಧ್ರಾದಲ್ಲಿ ಹಿಂದುತ್ವವಾದಿಗಳು ನಡೆಸಿದ ವಿಧ್ವಂಸದ... Continue Reading →

ಗೌತಮ #1 : Draft Mail – 3

ಚಿನ್ಮಯಿಯ mail boxನ draft folderನಲ್ಲಿ ಅವಳ ಬದುಕಿನ ಕೆಲವು ಮಹತ್ವದ ಸಂಗತಿಗಳು ದಾಖಲಿವೆ. ಮಡಚಿಟ್ಟ ಪುಟಗಳಂತೆ. ಬದುಕು ಇರುವುದು ತೆರೆದಿಟ್ಟ ಪುಸ್ತಕದಲ್ಲಿ ಅಲ್ಲ... ಈ ಹೇಳದೇ ಉಳಿದ ಮಾತುಗಳಲ್ಲಿ... ಈ ಮಾತುಗಳ ಸ್ವಗತವೇ Draft mail : ಅರೆಬರೆ ಕಾದಂಬರಿ. ಇದು ಕಾದಂಬರಿಯ ಮೂರನೇ ಕಂತು. ಚಿನ್ಮಯಿ ಆ ಮೇಲ್ ಕಳಿಸಲೂ ಇಲ್ಲ, ಸಾಯಲೂ ಇಲ್ಲ. (ಯಾವ mail...? ಇಲ್ಲಿ ನೋಡಿ: http://chetanachaitanya.mlblogs.com/2018/11/01/draft2/) ಆ ಮೊದಲ ಡ್ರಾಫ್ಟ್‍ನಿಂದ ಈವರೆಗಿನ ಕೊನೆಯ ಡ್ರಾಫ್ಟ್’ವರೆಗೆ ಹತ್ತು ವರ್ಷಗಳು ಕಳೆದಿವೆ. ಅದಕ್ಕೂ ಹಿಂದಿನದೆಲ್ಲ... Continue Reading →

ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 2

ಚಿನ್ಮಯಿ ತನ್ನ ಮೇಲ್'ನಲ್ಲಿ ಡ್ರಾಫ್ಟ್'ಗಳನ್ನು ತೆರೆದುಕೊಂಡು ಕೂತಿದ್ದಳು. ಅದರಲ್ಲಿದ್ದ ಹತ್ತಾರು ಮೇಲ್'ಗಳಲ್ಲಿ ಒಂದನ್ನು ಇವತ್ತು ಕಳಿಸೇಬಿಡಬೇಕೆಂದು ನಿರ್ಧರಿಸಿ, ಕಳಿಸಿಯೂ ಬಿಟ್ಟಳು. ಆ ಮೇಲ್ ಯಾವುದೆಂದು ಮತ್ತೆ ನೋಡಣ. ... ಇಷ್ಟಕ್ಕೂ ಚಿನ್ಮಯಿ ಮೇಲ್ ಐಡಿ ಕ್ರಿಯೇಟ್ ಮಾಡಿದ ನಂತರ ಡ್ರಾಫ್ಟಿನಲ್ಲಿ ಹಾಕಿಟ್ಟ ಮೊದಲ ಮೇಲ್ ಯಾವುದು ಗೊತ್ತಾ?  To: gautam108@gml.com ಡಿಯರ್ ಫೆಲೋಟ್ರಾವೆಲರ್, ನನ್ನ ತಿರುವಿನಲ್ಲಿ ತಿರುಗುತ್ತಿದ್ದೇನೆ. ಈ ತಿರುವೇ ನನ್ನ ನಿಲ್ದಾಣವೂ ಆಗಲಿದೆ. ನಂಗೆ ಸತ್ತುಹೋಗಬೇಕು ಅನಿಸುತ್ತಿದೆ. ಇದನ್ನು ನನ್ನ ಕೊನೆಯ ಪತ್ರ ಅಂದುಕೋ. ನೀನು... Continue Reading →

Draft Mail : ಅರೆ ಬರೆ ಕಾದಂಬರಿ

ಚಿನ್ಮಯಿ ಕಾಲು ನೀಡಿಕೊಂಡು, ಲ್ಯಾಪ್‍ಟಾಪ್ ತೆರೆದು ಕುಳಿತಿದ್ದಾಳೆ. ನಡು ಮಧ್ಯಾಹ್ನದ ಬಿಸಿಲು ಗೋಡೆಗೆ ಅಪ್ಪಳಿಸಿ, ಬಾಗಿಲುದ್ದ ನೆಲದ ಮೇಲೆ ಅಂಗಾತ ಬಿದ್ದಿದೆ. “ಅರೆ! ಬೆಳಕಿನ ಬಾಗಿಲು..” ತನ್ನೊಳಗೆ ಬೆರಗಾಗುತ್ತಾಳೆ. ಹಗೂರ ಎದ್ದು, ಹೊಸ್ತಿಲಾಚೆ ಬಿಸಿಲಿಗೆ ಬೆನ್ನಾಗಿ ನಿಲ್ಲುತ್ತಾಳೆ. ಮನೆಯೊಳಗೆ ನೆಲದಲ್ಲಿ ಅವಳ ನೆರಳು! ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಸೆಲ್ಫಿ ಮೋಡಿನಿಂದ ಮಾಮೂಲಿಗೆ ಬರುತ್ತಾಳೆ. ಯಾವ ಕೋನದಿಂದ ತೆಗೆದರೆ ಫೋಟೋ ಚೆನ್ನಾಗಿ ಬರುತ್ತದೆ ಅನ್ನೋದು ಅವಳಿಗೆ ಗೊತ್ತಿದೆ. ತಮ್ಮದೇ ಫೋಟೋ ತೆಗೆದುಕೊಳ್ಳುವವರು ಛಾಯಾಗ್ರಹಣವನ್ನ ವಿಶೇಷವಾಗಿ ಅಭ್ಯಾಸ ಮಾಡಬೇಕಿಲ್ಲ..... Continue Reading →

ಅಲರಾಮ್ 22 : ಪ್ರಾಣ್ ನೀಳ್ಗತೆ ಅಥವಾ ಕಿರು ಕಾದಂಬರಿ

ಮಾರ್ಚ್- 2003. ದೆಹಲಿಯ ಸ್ಮಶಾನ. ಅದಾ ಇಸ್ತರ್, 95ನೆ ವಯಸ್ಸಿನಲ್ಲಿ ಮರಣ ಹೊಂದಿದ್ದಾರೆ. ಅವರ ಮಗಳು ಅವಳನ್ನು ಮಣ್ಣು ಮಾಡಲು ನಿಂತಿದ್ದಾಳೆ. ಅವಳ ಕೈಯಲ್ಲಿ ಒಂದು ಡೈರಿ, ಆ ಡೈರಿಯನ್ನು ನಾನು ಸತ್ತಮೇಲೆ ಓದಬೇಕು ಎಂದು ಇಸ್ತರ್ ತನ್ನ ಕೊನೆಯದಿನಗಳಲ್ಲಿ ಕೊಟ್ಟಿದ್ದಾರೆ. ಅವಳಿಗೆ ಅದನ್ನು ಓದುವ ಕಾತರವಾಗುತ್ತಿದೆ. ಎಲ್ಲಾ ಕಾರ್ಯಗಳು ಮುಗಿದ ನಂತರ ದೆಹಲಿಯಲ್ಲಿ ಇದ್ದ ತನ್ನ ಮನೆಗೆ ಅವಳು ತೆರಳಿದ್ದಾಳೆ. ಆ ಪುಸ್ತಕವನ್ನು ತೆಗೆಯುತ್ತಾಳೆ. ಬೇರೆಯವರ ಡೈರಿಯನ್ನು ಕದ್ದು ಓದುವುದು ಮೂರ್ಖತನ ಎಂದು ಆ ಡೈರಿಯಲ್ಲಿ... Continue Reading →

ಥೇರಿಯರ ಹಾಡು

ಥೇರಿಯರ (ಹಿರಿಯ ಬೌದ್ಧ ಬಿಕ್ಖುಣಿಯರು) ರಚನೆಗಳ ಅನುವಾದ ಯತ್ನವಿದು.... ನನ್ನಿರುವ ಕಾಂತಿ, ಕಣ್ ಹೊಳಪು ರೂಪ, ಮೈಬಣ್ಣಗಳಿಂದ ನೆರಕೆಯ ಹೆಣ್ಣುಗಳ ಹೊಟ್ಟೆಯುರಿಸುತಿದ್ದೆ. ಮೂರ್ಖ ಗಂಡಸರನ್ನ ಸೆಳೆಯಲಿಕ್ಕಾಗಿ ದೇಹವಲಂಕರಿಸಿ ನಿಂತು ಕೋಠಿ ಬಾಗಿಲ ಮುಂದೆ ಕಾಯುತಿದ್ದೆ. ಬೇಟೆಗಾತಿಯ ಹಾಗೆ ಹೊಂಚುತ್ತ ನನ್ನಾಭರಣಗಳ ಕುಲುಕಿ ಸೆಳೆದು ಮೋಹದ ಬಲೆಗೆ ಕೆಡವುತಿದ್ದೆ, ಬಿದ್ದವನ ಕಂಡು ಗುಂಪು ಸೀಳುವಂತೆ ಅಬ್ಬರಿಸಿ ನಗುತಲಿದ್ದೆ. ಈಗ... ಅದೇ ದೇಹ ದುಪ್ಪಟಿ ಕಾವಿ ಸುತ್ತಿಕೊಂಡಿದೆ; ತಲೆಗೂದಲು ತೆಗೆದು ಸಪಾಟು. ಭಿಕ್ಷೆಗಾಗಿ ಅಲೆದ ದಣಿವಲ್ಲಿ ಮರದ ಬೊಡ್ಡೆಗೆ ಮೈಯಾನಿಸಿ... Continue Reading →

ಹಳಬನಾಗೋದಿಲ್ಲ ರಾಮ….

ನಕ್ಕರೆ, ನೋಡಿದರೆ, ಬೆವರಿದರು - ಸೀನಿದರೂ ಮಕ್ಕಳಾಗ್ತವೆ ಪುರಾಣಗಳಲ್ಲಿ. ರಾಮ ನಡೆದಲ್ಲೆಲ್ಲ ರೋಮ ಉದುರಿಸಿದ್ದನೇನೋ! ನಮ್ಮ ಬಹಳಷ್ಟು ಗಂಡಸರಿಗೆ ಸಂಶಯ ವಂಶವಾಹಿ!! ~ ಬೆಂಕಿಗೆ ಸೀತೆಯನ್ನ ಸುಡಲಾಗಲಿಲ್ಲ ರಾಮನ ಸಂಶಯವನ್ನೂ... ~ ಹಳಬನಾಗೋದಿಲ್ಲ ರಾಮ, ಅವನ ಕಥೆಯೂ... ಇಲ್ಲಿ ಹೆಣ್ಣುಗಳು ಇನ್ನೂ ತಿರಸ್ಕರಿಸಲ್ಪಡುತ್ತಲೇ ಇದ್ದಾರೆ ಅನುಮಾನದಲ್ಲಿ. ~ ರಾಮನಿಗೆ ಅಗ್ನಿದಿವ್ಯಕ್ಕಿಂತ ಮಡಿವಾಳನ ಮಾತೇ ಹೆಚ್ಚಾಗಿದ್ದು ಅವು ತನ್ನವೂ ಆಗಿದ್ದವೆಂದೇ ತಾನೆ? ಇಲ್ಲದಿದ್ದರೆ ಅಂವ ಶಂಭೂಕನನ್ನ ಕೊಲ್ತಿರಲಿಲ್ಲ... ~ ಶಂಭೂಕರು ಮತ್ತು ಸೀತೆಯರನ್ನು  ಗೋಳಾಡಿಸುವ ನೆಲಕ್ಕೆ ನೆಮ್ಮದಿ ಮರೀಚಿಕೆ.... Continue Reading →

ದೇವಯಾನಿಯರ ದುಃಖಾಂತ

ಮುಂಜಾನೆಯ ಅಂಗಳದಲ್ಲಿ ಪಾರಿಜಾತ ಚೆಲ್ಲಿ ಬಿದ್ದಿದೆ. ಚಿಗುರು ಬೆರಳಿನ ಹುಡುಗಿಯಿನ್ನೂ ಆಯಲು ಬಂದಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ, ಅಗುವುದೂ ಇಲ್ಲ. ಎಷ್ಟು ಹಗಲು ಹುಟ್ಟಿಬಂದರೂ ಅವಳ ಪಾಲಿನ ಕತ್ತಲು ಕಳೆಯುವುದಿಲ್ಲ. ಇದು ನಿಶ್ಚಿತ. ಯಾಕಂದರೆ ಅವಳ ಬೆಳಕನ್ನೆಲ್ಲ ಅವನು ಗಂಟು ಕಟ್ಟಿ ಒಯ್ದುಬಿಟ್ಟಿದ್ದಾನೆ ಜೊತೆಗೆ. ಅದೇ ಅವನು, ಶಿಷ್ಯನ ಸೋಗಿನಲ್ಲಿ ಬಂದು ಅವಳಪ್ಪನ ವಿದ್ಯೆಯನ್ನು ವಂಚಿಸಿ ಒಯ್ದವನು. ಕಚ ಅನ್ನುತ್ತಾರೆ ಅವನನ್ನ. ಮತ್ತವಳು ದೇವಯಾನಿಯಲ್ಲದೆ ಇನ್ಯಾರು? ~ ಸುರ ಪಾಳಯದ ಹುಡುಗ ಕಚ ಸಂಜೀವನಿ ಮಂತ್ರ... Continue Reading →

‘ಮಗು’ ~ ಮೂರು ಪದ್ಯಗಳು

ಈ ಮೂರು ಕವಿತೆಗಳು ಕಾಲಕ್ರಮದಲ್ಲಿ ಮಗನ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಬರೆದವು. ಈ ಮೂರೂ ಕವಿತೆಗಳು ಬದುಕಿನ ಪಲ್ಲಟಗಳನ್ನು ಸಂಕೇತಿಸುತ್ತವೆಂದು ಅಂದುಕೊಳ್ಳುತ್ತೇನೆ.  ಮಗುವಲ್ಲಿ ಅವನ ನಗು! (2007) ಮಗು. ಅರೆ! ನನ್ನದೇ ಜೀವ, ನನ್ನ ನಿರಂತರತೆ. ಆದರೆ ಅದು ನಾನಲ್ಲ. ಅದು ನಾನು ಮಾತ್ರ ಅಲ್ಲ. ಅಂವ ಕೂಡ ಅಂದುಕೊಳ್ತಾನೇನೋ, ನನ್ನ ಮಗು, ನನ್ನದೇ ನಿರಂತರತೆ! ಮಗು. . . ಈಗ ತಾನೆ ಕಡೆದು ತೆಗೆದ ಮೆದು ಬೆಣ್ಣೆ. ಕಾದು ಕಾದು ಹೊನ್ನುಗಟ್ಟಿದ ಹಾಲುಕೆನೆ. ಮಗು, ಹುಲ್ಲಿನೆಳೆಯ ಮೇಲಿನ... Continue Reading →

Blog at WordPress.com.

Up ↑